ಜ್ಯೋತಿಷಿ ಹೇಳಿದನೆಂದು ಗಂಡು ಮಗುವಿಗಾಗಿ 10 ಮಕ್ಕಳನೆತ್ತ ದಂಪತಿ

ಶನಿವಾರ, 25 ಮಾರ್ಚ್ 2017 (12:23 IST)
ಜ್ಯೋತಿಷಿ ಹೇಳಿದನೆಂದು ಗಂಡು ಮಗುವಿಗಾಗಿ ದಂಪತಿ 10 ಮಕ್ಕಳಿಗೆ ಜನ್ಮ ನೀಡಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕುರಿಕೇನಹಳ್ಳಿಯಲ್ಲಿ ನಡೆದಿದೆ.

ಗಂಡು ಮಗು ಜನನದ ಬಳಿಕ ನಿಮ್ಮ ಕಷ್ಟ ದೂರಾಗುತ್ತದೆ ಎಂದು ಜ್ಯೋತಿಷಿ ಹೇಳಿದ ಮಾತನ್ನ ನಂಬಿದ ರಾಮಕೃಷ್ಣಪ್ಪ ಮತ್ತು ಭಾಗ್ಯಮ್ಮ ದಂಪತಿ 10 ಮಕ್ಕಳನ್ನ ಹೆತ್ತಿದ್ದಾರೆ. 9 ಹೆಣ್ಣುಮಕ್ಕಳಾಗಿದ್ದು, ನಿನ್ನೆ ಜನಿಸಿದ 10ನೇಯದ್ದು ಗಂಡು ಮಗುವಾಗಿದೆ.

ಸುಮಾರು ವರ್ಷಗಳಿಂದ ಈ ದಂಪತಿ ಗಂಡು ಮಗುವಿಗಾಗಿ ಹಾತೊರೆಯುತ್ತಿದ್ದರೆಂದು ತಿಳಿದು ಬಂದಿದೆ.
.

ವೆಬ್ದುನಿಯಾವನ್ನು ಓದಿ