ಮೇವಿಲ್ಲದೆ ಮೂಕ ಪ್ರಾಣಿಗಳ ರೋದನೆ

ಶನಿವಾರ, 10 ಸೆಪ್ಟಂಬರ್ 2022 (19:44 IST)
ಬಳ್ಳಾರಿಯ ಬಸರಕೋಡು ಗ್ರಾಮದಲ್ಲಿ ಮೇವಿಲ್ಲದೇ ಜಾನುವಾರುಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬಳ್ಳಾರಿ ತಾಲೂಕಿನ ಬಸರಕೋಡು ಗ್ರಾಮದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಕಳೆದ 4-5 ದಿನಗಳಿಂದ ಜಾನುವಾರುಗಳಿಗೆ ಮೇವಿನ ಕೊರತೆಯಾಗಿದೆ.  ಮೇವಿನ ಬಣವೆಗಳು ಹಗರಿ ನದಿಯ ಪ್ರವಾಹಕ್ಕೆ ಕೊಚ್ಚಿಕೊಂಡು ಹೋಗಿವೆ. ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಕಲ್ಪಿಸಿ ಕೊಡುವುದಾಗಿ ಜಿಲ್ಲಾಡಳಿತ ಹೇಳಿತ್ತು. ಆದರೆ ಇದುವರೆಗೂ ಅಧಿಕಾರಿಗಳು ಮೇವು ಪೂರೈಕೆ ಮಾಡಿಲ್ಲ. ಗ್ರಾಮಸ್ಥರು ಜಾನುವಾರುಗಳ ಮೂಕರೋಧನೆ ಕಂಡು ಮರುಕ ಪಡುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ