ಹೆಣ್ಣು ಮಗುವಿನೊಂದಿಗೆ ನದಿ ದಾಟಿ ಕಾಡಿಗೆ ಹೋಗಿದ್ಯಾಕೆ?

ಗುರುವಾರ, 11 ಜುಲೈ 2019 (16:33 IST)
ಮುಸುಕುಧಾರಿಯೊಬ್ಬ ಹೆಣ್ಣುಮಗುವನ್ನು ಹೊತ್ತುಕೊಂಡು ನದಿ ದಾಟಿ ಕಾಡಿಗೆ ಹೋಗಿರುವ ಘಟನೆ ನಡೆದಿದೆ.

ಬೆಳ್ಳಂಬೆಳಿಗ್ಗೆ ದುಷ್ಕರ್ಮಿಗಳು ಮಗುವನ್ನು ಅಪಹರಣ ಮಾಡಿದ್ದಾರೆ.

ಸಂತೋಷ್ ನಾಯ್ಕ್ ಎಂಬುವರ ಎರಡು ವರ್ಷ ಪ್ರಾಯದ  ಹೆಣ್ಣು ಮಗು "ಸಾನ್ವಿಕಾ" ತಾಯಿಯೊಂದಿಗೆ ಮಲಗಿರುವಾಗ ಮುಸುಕು ಧಾರಿ ವ್ಯಕ್ತಿಯೊಬ್ಬ ಮಗುವನ್ನು ಅಪಹರಿಸಿಕೊಂಡು ಹೋಗಿದ್ದಾನೆ.  ತುಂಬಿ ಹರಿಯುವ ಕುಮ್ಜಾ ನದಿಯನ್ನು ದಾಟಿ ಕಾಡಿನ ಮೂಲಕ ಹೊಸಂಗಡಿಯತ್ತಾ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಹೆಣ್ಣು ಮಗುವನ್ನು ಅಪಹರಿಸಿಕೊಂಡು ಹೋಗುವಾಗ ತಾಯಿಗೆ ಎಚ್ಚರವಾಗಿ ಕೂಡಲೇ ಆ ವ್ಯಕ್ತಿಯ ಹಿಂದೆ ಓಡಿದ್ದಾರೆ. ಆದರೆ ನದಿಯ ನೀರು ತುಂಬಾ ಇರುವ ಕಾರಣ ಹಾಗೂ ಕತ್ತಲೆ ಇರುವ ಕಾರಣ ಆತನನ್ನು ಹಿಂಬಾಲಿಸಲು ಸಾಧ್ಯವಾಗಲಿಲ್ಲ.

ಇವರ ಮನೆಗೆ ಬರಲು ಮೂರ್ನಾಲ್ಕು ದಾರಿಗಳಿದ್ದರೂ ನದಿಯ ದಾರಿಯಲ್ಲೇ ಹೋಗಿದ್ದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಕುಂದಾಪುರ ತಾಲ್ಲೂಕಿನ ಎಡಮೊಗೆ ಕುಮ್ಟಿ ಬೇರಿನಲ್ಲಿ ಘಟನೆ ನಡೆದಿದೆ. 

ಮಕ್ಕಳ ಕಳ್ಳತನ ಮಾಡಿ ಸಾಗಿಸುವ ಮಾಫಿಯಾದ ಕೈವಾಡನೋ ಅಥವಾ ಕೌಂಟುಬಿಕ ಮನಸ್ತಾಪದಿಂದ ಆಗಿರುವ ಘಟನೆಯೋ ಎಂದು ಪೊಲೀಸರು ಪತ್ತೆ ಹಚ್ಚಬೇಕಿದೆ. 

ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಶಂಕರನಾರಾಯಣ ಪೊಲೀಸರು ಸ್ಥಳಕ್ಕೆ ಬಂದು ಪರೀಶಿಲನೆ ನಡೆಸುತ್ತಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ