ಸಹಚರರ ಮೇಲೆ ಜೈಲಿನಲ್ಲಿ ಗರಂ ಆದ ದರ್ಶನ್

Krishnaveni K

ಶುಕ್ರವಾರ, 5 ಜುಲೈ 2024 (16:52 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಎರಡನೇ ಬಾರಿ ನ್ಯಾಯಾಂಗ ಬಂಧನಕ್ಕೊಳಗಾದ ನಟ ದರ್ಶನ್ ಈಗ ಹತಾಶೆಗೊಳಗಾಗಿದ್ದು, ಸಹಚರರ ಮೇಲೆ ಗರಂ ಆಗಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆಯಷ್ಟೇ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾದ ಹಿನ್ನಲೆಯಲ್ಲಿ ಮತ್ತೊಮ್ಮೆ ದರ್ಶನ್ ಮತ್ತು ಗ್ಯಾಂಗ್ ನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಅದರಂತೆ ನಿನ್ನೆ ಮತ್ತೊಮ್ಮೆ ನ್ಯಾಯಾಧೀಶರು ಎಲ್ಲರಿಗೂ ನ್ಯಾಯಾಂಗ ಬಂಧನ ವಿಸ್ತರಿಸಿದರು.

ಮತ್ತೆ ಜೈಲೇ ಗತಿಯಾದ ಬಳಿಕ ದರ್ಶನ್ ಸಹಚರರ ಮೇಲೆ ಗರಂ ಆಗಿದ್ದಾರೆ. ನಿಮ್ಮ ಸಹವಾಸದಿಂದಲೇ ನನಗೆ ಈ ಪರಿಸ್ಥಿತಿ ಬಂದಿದೆ ಎಂದು ಸಹಚರರ ಮೇಲೆ ಕೂಗಾಡಿದ್ದಾರೆ ಎಂದು ತಿಳಿದುಬಂದಿದೆ. ನಿಮ್ಮ ಸಹವಾಸ ಮಾಡಿದ್ದಕ್ಕೆ ನನಗಿದು ಬೇಕಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮೊದಲೇ ನಿಮ್ಮನ್ನೆಲ್ಲಾ ದೂರ ಇಡಬೇಕಾಗಿತ್ತು ಎಂದು ಪಶ್ಚಾತ್ತಾಪ ಪಟ್ಟಿದ್ದಾರೆಂದು ಹೇಳಲಾಗಿದೆ. ನಿಮ್ಮ ಸಹವಾಸ ಮಾಡಿದ್ದರಿಂದ ನಾನು ಇಂದು ಅನುಭವಿಸುತ್ತಿದ್ದೇನೆ ಎಂದು ಬೇಸರ ಹೊರಹಾಕಿದ್ದಾರೆ ಎಂದು ಹೇಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ