ಪ್ರತಿವರ್ಷದಂತೆ ಧಾರ್ಮಿಕ ಕೈಂಕರ್ಯ ನಡೆಯುತ್ತವೆ: ಪ್ರಮೋದಾ ದೇವಿ ಒಡೆಯರ್

ಸೋಮವಾರ, 18 ಸೆಪ್ಟಂಬರ್ 2017 (19:16 IST)
ಮೈಸೂರು: ಪ್ರತಿ ವರ್ಷದಂತೆ ಈ ಬಾರಿಯೂ ಅರಮನೆಯಲ್ಲಿ ಧಾರ್ಮಿಕ ಕೈಂಕರ್ಯಗಳು ಮುಂದುವರೆಯುತ್ತವೆ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.

ಜಿಲ್ಲಾಡಳಿತ ವತಿಯಿಂದ ಆಮಂತ್ರಣ ಸ್ವೀಕರಿಸಿ ಮಾತನಾಡಿದ ಅವರು, ಖಾಸಗಿ ದರ್ಬಾರ್ ಹಾಗೂ ಜಂಬೂ ಸವಾರಿ ಚಾಲನೆ ವೇಳೆ ಈ ಬಾರಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪುಷ್ಪಾರ್ಚನೆ ಮಾಡಲಿದ್ದಾರೆ. ಖಾಸಗಿ ದರ್ಬಾರ್ ನಲ್ಲಿ ಯದುವೀರ್ ಒಡೆಯರ್ ಪತ್ನಿ, ಗರ್ಭಿಣಿ ತ್ರಿಷಿಕಾ ದೇವಿ ಒಡೆಯರ್ ಕೂಡ ಪಾಲ್ಗೊಳ್ಳಲಿದ್ದಾರೆ ಎಂದರು. ಈ ವರ್ಷ ಉತ್ತಮ ಮಳೆ-ಬೆಳೆ ಆಗಿದೆ. ತಾಯಿ ಚಾಮುಂಡೇಶ್ವರಿ ನಾಡಿನ ಜನರಿಗೆ ಶುಭವನ್ನುಂಟುಮಾಡಲಿ. ನಾಡಿನ ಜನತೆಗೆ ದಸರಾ ಶುಭಾಶಯ ತಿಳಿಸಿದರು.

ಇನ್ನು ನವರಾತ್ರಿ ಉತ್ಸವಕ್ಕೆ ಆಗುವ ಖರ್ಚುವೆಚ್ಚಕ್ಕೆ ಎಂದು ಸರ್ಕಾರದ ವತಿಯಿಂದ ಪ್ರತಿ ವರ್ಷ ಗೌರವಧನ ನೀಡಲಾಗುತ್ತೆ. ಈ ಬಾರಿ 36 ಲಕ್ಷದ  ರೂ. ಚೆಕ್ ನ್ನು ಜಿಲ್ಲಾಡಳಿತ ನೀಡಿದ್ದು, ಪ್ರಮೋದಾ ದೇವಿ ಒಡೆಯರ್ ಚೆಕ್ ಸ್ವೀಕರಿಸಿದ್ದಾರೆ. ಕಳೆದ ಬಾರಿ ಸಹ ಜಿಲ್ಲಾಡಳಿತ 35 ಲಕ್ಷ ರೂ. ಚೆಕ್ ನೀಡಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ