ಜೀಮ್ ನಲ್ಲಿ ವರ್ಕೌಟ್ ಮಾಡಿದ ನಟರ ಸಾವು ಹೇಗೆ..?

ಭಾನುವಾರ, 31 ಅಕ್ಟೋಬರ್ 2021 (19:44 IST)
ಬದುಕಲು ದೇಹ ಗಟ್ಟಿಮುಟ್ಟಾಗಿ ಆರೋಗ್ಯವಾಗಿರಬೇಕು ಆದರೆ ದೇಹದಾರ್ಡ್ಯತೆಯೊಂದೇ ಬದುಕಿನಶ್ರೇಷ್ಠತೆಗೆ ಮಾನದಂಡ ಎಂದೆಣಿಸಬಾರದು. ಇಂದು ಪುನೀತ್ ರಾಜ್ ಕುಮಾರ್ ಸಾವನ್ನು ಕಂಡಾಗ ಹೀಗೆನ್ನಿಸಿತು. ಸ್ಯಾಂಡಲ್ ವುಡ್ ನಲ್ಲಿ ಇದು ಎರಡನೇ ಘಟನೆ, ಕಳೆದ ವರ್ಷ ಯುವನಟ ಚಿರಂಜೀವಿ ಸರ್ಜಾ ಕೂಡ ಹೀಗೇ ಅಕಾಲಿಕ ಸಾವನ್ನು ಕಂಡಿದ್ದರು.
 
ಅಂದೂ ಸಹ ಇಡೀ ಕನ್ನಡ ನಾಡು ಶೋಕದಲ್ಲಿತ್ತು.
 
ಇಂದು ವರನಟ ಡಾ. ರಾಜ್ ಕುಟುಂಬದ ಕುಡಿ,
ಪುನೀತ್ ನಮ್ಮನ್ನಗಲಿದ್ದಾರೆ. ಈ ಸಂದರ್ಭದಲ್ಲಿ ಒಬ್ಬ ಕಲಾವಿದನಿಗೆ ದೇಹದಾರ್ಡ್ಯತೆ ಎಷ್ಟರ ಮಟ್ಟಿಗೆ ಮುಖ್ಯ? ಫಿಟ್ ನೆಸ್ ಇದ್ದವರಿಗೆ ಮಾತ್ರ ಚಿತ್ರದಲ್ಲಿ ನಾಯಕನಾಗುವುದು ಸಾಧ್ಯವೆ? ಒಂದೊಮ್ಮೆ ಫಿಟ್ ನೆಸ್ ಇಲ್ಲದಿದ್ದರೆ ಅಥವಾ ಸಾಕಷ್ಟು ದೇಹದಾರ್ಡ್ಯತೆ ಪ್ರದರ್ಶಿಸದೆ ಹೋದರೆ ಚಿತ್ರೋದ್ಯಮದಲ್ಲಿ ಅಂತಹ ನಾಯಕರಿಗೆ ಅವಕಾಶ ಇಲ್ಲವಾಗುತ್ತದೆಯೆ? ಎಂಬತ್ತ ಗಮನ ಹರಿಸಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ