BBMP ಮೇಯರ್ ವಿರುದ್ಧ ಜೆಡಿಎಸ್ ವರಿಷ್ಠರಿಗೆ ದೂರು ನೀಡಿದ ಉಪಮೇಯರ್

ಮಂಗಳವಾರ, 15 ಜನವರಿ 2019 (13:36 IST)
ಬೆಂಗಳೂರು : BBMP  ಮೇಯರ್ ಹಾಗೂ ಉಪಮೇಯರ್ ನಡುವೆ ಶೀತಲ ಸಮರ ಶುರುವಾಗಿದ್ದು, ಮೇಯರ್ ವಿರುದ್ಧ ಉಪಮೇಯರ್ ಜೆಡಿಎಸ್ ವರಿಷ್ಠರಿಗೆ ದೂರು ನೀಡಿದ್ದಾರೆ.


ಉಪಮೇಯರ್ ನ್ನು ಕಡೆಗಣಿಸುತ್ತಿರುವ ಹಿನ್ನಲೆಯಲ್ಲಿ ಮೇಯರ್ ಗಂಗಾಂಬಿಕೆ ವಿರುದ್ಧ ಉಪಮೇಯರ್ ಭದ್ರೆಗೌಡ  ಜೆಡಿಎಸ್ ವರಿಷ್ಠ ದೇವೇಗೌಡರಿಗೆ ದೂರು ನೀಡಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.


‘ಉಪಮೇಯರ್ ನ್ನು ಕಡೆಗಣಿಸಲಾಗುತ್ತಿದೆ, ಎಲ್ಲೇ ಹೋದರೂ, ಏನೇ ಮಾಡಿದರೂ ಉಪಮೇಯರ್ ಗೆ ಆಹ್ವಾನ ನೀಡುತ್ತಿಲ್ಲ. ಎಲ್ಲ ನಿರ್ಧಾರವನ್ನು ಏಕಪಕ್ಷೀಯವಾಗಿ ತೆಗೆದುಕೊಳ್ಳುತ್ತಿದ್ದಾರೆ’ ಎಂದು  ಉಪಮೇಯರ್ ದೇವೇಗೌಡರಿಗೆ ದೂರು ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ