ರೈತ ಮಹಿಳೆ ಬಗ್ಗೆ ನೀಡಿದ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದರೂ ಕೂಡ ಕ್ಷಮೆ ಮಾತ್ರ ಕೇಳಲಿಲ್ಲ ಸಿಎಂ

ಸೋಮವಾರ, 19 ನವೆಂಬರ್ 2018 (13:10 IST)
ಬೆಂಗಳೂರು : ರೈತ ಮಹಿಳೆ ಬಗ್ಗೆ ಹೇಳಿಕೆ ನೀಡಿದ್ದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಇದೀಗ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದರೂ ಕೂಡ ಕ್ಷಮೆ ಮಾತ್ರ ಕೇಳಲಿಲ್ಲ ಎನ್ನಲಾಗಿದೆ.


ಹೌದು. ಸಿಎಂ ಹೆಚ್.ಡಿ.ಕುಮಾರಸ್ವಾಮಿ ರೈತ ಮಹಿಳೆ ಬಗ್ಗೆ ಹೇಳಿಕೆ ನೀಡಿದ್ದರ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಪ್ರತಿಭಟನೆಯಲ್ಲಿ ನನ್ನನ್ನ ನಿಂದಿಸಿದ್ದಕ್ಕೆ ನೋವಾಗಿತ್ತು. ಇದಕ್ಕೆ ನಾನು ನೀಡಿದ ಪ್ರತಿಕ್ರಿಯೆಯಲ್ಲಿ ದುರುದ್ದೇಶ ಇರಲಿಲ್ಲ. ಮಾತಿನ ಅರ್ಥ ಗ್ರಹಿಸಿದೇ ಚರ್ಚೆ ಆಗುತ್ತಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.


ಆದರೆ ಹೆಣ್ಣು ಮಕ್ಕಳ ಬಗ್ಗೆ ನಾನು ಅಪಾರ ಗೌರವ ಇಟ್ಟುಕೊಂಡಿದ್ದೇನೆ ಎಂದು ಸಿಎಂ ಹೇಳಿದ್ದರೂ ಕೂಡ ಪತ್ರಿಕಾ ಪ್ರಕಟಣೆಯಲ್ಲಾಗಲಿ, ಬಹಿರಂಗವಾಗಿ ಆಗಲಿ ಎಲ್ಲೂ ಈ ಬಗ್ಗೆ ಕ್ಷಮೆ ಮಾತ್ರ ಕೇಳಲೇ ಇಲ್ಲ  ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ