ಫಲಿತಾಂಶ ಬರಲಿ ನಾಳೆ ನೋಡೋಣ: ಗುಟ್ಟು ಬಿಟ್ಟುಕೊಡದ ದೇವೇಗೌಡರು

ಸೋಮವಾರ, 14 ಮೇ 2018 (13:30 IST)
ಬೆಂಗಳೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ಎದುರಾದರೆ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಜೆಡಿಎಸ್ ವರಿಷ್ಠ ದೇವೇಗೌಡರು ಯಾವುದೇ ಬಿಟ್ಟುಕೊಡಲು ನಿರಾಕರಿಸಿದ್ದಾರೆ.

ದಲಿತ ಮುಖ್ಯಮಂತ್ರಿ ಸೂತ್ರದೊಂದಿಗೆ ಅತಂತ್ರ ಸ್ಥಿತಿ ಬಂದರೆ ಜೆಡಿಎಸ್ ಜತೆಗೆ ಸರ್ಕಾರ ರಚಿಸಲು ಕಾಂಗ್ರೆಸ್ ಒಲವು ಹೊಂದಿದೆ. ಆದರೆ ದೇವೇಗೌಡರು ಈಗ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

‘ನಾಳೆ ಫಲಿತಾಂಶ ಬರಲಿ ಆಮೇಲೆ ನೋಡೋಣ. ಫಲಿತಾಂಶ ಬರದೇ ಏನನ್ನೂ ಹೇಳಲು ಸಾಧ್ಯವಿಲ್ಲ. ಜೆಡಿಎಸ್ 22 ಸ್ಥಾನ ಬರಬಹುದು ಅಂತಾರೆ. ಫಲಿತಾಂಶ ಬಂದ ಬಳಿಕ ಯಾರು ಸರ್ಕಾರ ರಚಿಸುತ್ತಾರಾ ನೋಡೋಣ’ ಎಂದು ದೇವೇಗೌಡರು ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ