ಬಿಲ್ಡಫ್ ಗಾಗಿ ಪೊಲೀಸರಿಗೆ ಧಮ್ಕಿ

ಭಾನುವಾರ, 3 ಅಕ್ಟೋಬರ್ 2021 (16:05 IST)
ಬಿಲ್ಡಫ್ ಗಾಗಿ ಪೊಲೀಸರಿಗೆ ಧಮ್ಕಿ ಹಾಕಿದ ಮೆಂಟಲ್ ಮಂಜನನ್ನ ಅವಲಹಳ್ಳಿ ಪೊಲೀಸರು ಅಂದರ್ ಮಾಡಿದ್ದಾರೆ.ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕುಳ್ಳ ವೆಂಕಟೇಶ್ ಪ್ರಕರಣಕ್ಕೆ ಸಂಭಂಧಿಸಿದಂತೆ ಮಂಜ ಆಲೀಯಾಸ್ ಮೆಂಟಲ್ ಮಂಜ ಎಸ್ಪಿ ಹಾಗು ಡಿವೈಎಸ್ಪಿ ಗೆ ಧಮ್ಕಿ ಹಾಕಿರುವ ಆಡೀಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.ಹೇ ಖಾಕಿ ಕೊಲೆ ಮಾಡಿರುವುದು ಅನಿಲ್ ಅಲ್ಲಾ ನಾನು ತಾಕತ್ತಿದ್ರೆ ನನ್ನ ಹಿಡಿಯಿರಿ ಎಂದು ಧಮ್ಕಿ ಹಾಕಿದ್ದ.ವೆಂಕಟೇನ ತಲೆಗೆ ನಾನೆ ಹೊಡೆದದ್ದು ಆದ್ರೆ ಅನಿಲ್ ಗೆ ಟ್ರೀಟ್ ಮೆಂಟ್ ಕೊಡ್ತೀರಾ ಅಂತಾ ಧಮ್ಕಿ ಹಾಕಿದ್ದ.ಕೊನೆಗೂ ಕೊಲೆಯಲ್ಲಿ ಪಾತ್ರವಿಲ್ಲದಿದ್ದರು  ಬಿಲ್ಡಫ್ ಕೊಟ್ಟ ಶೋಕಿವಾಲನನ್ನು
ಅವಲಹಳ್ಳಿ ಪೊಲೀಸರು ಬಂಧಿಸಿ ಸರಿಯಾಗೆ ಟ್ರಿಟ್ ಮೆಂಟ್ ನೀಡಿದ್ದಾರೆ.ತಮಿಳು ನಾಡಿನಲ್ಲಿ ಅವಿತುಕೊಂಡಿದ್ದ ಈ ಶೋಕಿ ರೌಡಿಯನ್ನು ಬಂಧಿಸಲು ವಿಶೇಷ ತಂಡ ರಚಿಸಿದ ಪೊಲೀಸರು ಕೊನೆಗೂ ಪತ್ತೆ ಹಚ್ಚಿ ತನಿಖೆ ನಡೆಸ್ತಾ ಇದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ