ಧರ್ಮಸ್ಥಳ ಕೇಸ್: ಕೊನೆಗೂ ಆ ಮಹತ್ವದ ತನಿಖೆಗೆ ಸಮಯ ಬಂದೇ ಬಿಡ್ತು
ಅನಾಮಿಕ ದೂರುದಾರ ಒಟ್ಟು 13 ಸ್ಥಳಗಳನ್ನು ಗುರುತಿಸಿದ್ದ. ಈ ಸ್ಥಳಗಳಲ್ಲಿ ತಾನು ಶವಗಳನ್ನು ಹೂತು ಹಾಕಿದ್ದೇನೆ ಎಂದಿದ್ದ. ಇದಲ್ಲದೆಯೂ ಕೆಲವು ಸ್ಥಳಗಳಲ್ಲಿ ಎಸ್ಐಟಿ ಮಣ್ಣು ಅಗೆದು ಅಸ್ಥಿಪಂಜರಕ್ಕಾಗಿ ಹುಡುಕಾಟ ನಡೆಸಿತ್ತು.
ಆದರೆ 13 ನೇ ಪಾಯಿಂಟ್ ನಲ್ಲಿ ಇದುವರೆಗೆ ಹುಡುಕಾಟ ನಡೆಸಿರಲಿಲ್ಲ. ಹೀಗಾಗಿ ಎಲ್ಲರಿಗೂ ಈ ಪಾಯಿಂಟ್ ನ ಮೇಲೆ ಕುತೂಹಲವಿದೆ. ಕೊನೆಗೂ ಇಂದು 13 ನೇ ಪಾಯಿಂಟ್ ನಲ್ಲಿ ಎಸ್ಐಟಿ ತಂಡ ಹುಡುಕಾಟ ನಡೆಸಲಿದೆ ಎಂದು ತಿಳಿದುಬಂದಿದೆ.
ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪವೇ 13 ನೇ ಪಾಯಿಂಟ್ ಇದೆ. ಈ ಸ್ಥಳ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಇಲ್ಲಿ ಮಣ್ಣು ಅಗೆದು ಪರಿಶೀಲನೆ ಮಾಡುವುದು ಕಷ್ಟ. ಹೀಗಾಗಿ ಜಿಪಿಆರ್ ಬಳಸಿ ಇಂದು ಶೋಧ ಕಾರ್ಯ ನಡೆಸಲಿದ್ದಾರೆ.