ನನ್ನನ್ನು ಜೀವಂತವಾಗಿ ಸುಡುವ ಪ್ಲಾನ್ ಮಾಡಿದ್ರು ಎಂದ ಶಾಸಕ ?

ಬುಧವಾರ, 19 ಆಗಸ್ಟ್ 2020 (18:22 IST)
ರಾಜಕೀಯಕ್ಕಾಗಿ ರಾಜಕೀಯ ಮಾಡಬೇಕು. ಆದರೆ ಗಲಭೆ ವೇಳೆ ನಾನು ಸಿಕ್ಕಿದ್ರೆ ನನ್ನನ್ನು ಜೀವಂತವಾಗಿ ಸುಡುತ್ತಿದ್ದರು ಎಂದು ಕಾಂಗ್ರೆಸ್ ಶಾಸಕರು ಹೇಳಿದ್ದಾರೆ.


ರಾಜಕೀಯವಾಗಿ ನನ್ನ ಏಳಿಗೆ ಸಹಿಸದ ಕೆಲವರು ಈ ರೀತಿ ಗಲಭೆ ಮಾಡಿಸಿ, ನನ್ನ ಮನೆ ಸುಟ್ಟಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ. 

ಬೆಂಗಳೂರಿನಲ್ಲಿ ನಡೆದ ಗಲಭೆಯಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ, ದಾಖಲೆ ಪತ್ರಗಳು ಸುಟ್ಟಿವೆ.

ರಾಜಕೀಯವಾಗಿ ನನ್ನನ್ನು ಎದುರಿಸುವ ಶಕ್ತಿಇಲ್ಲದವರೇ ಈ ರೀತಿ ನನ್ನ ವರ್ಚಸ್ಸಿಗೆ ಧಕ್ಕೆ ತಂದು, ನನ್ನ ಜೀವ ತೆಗೆಯೋಕೆ ಮುಂದಾಗಿದ್ದರು ಎಂಬ ಅನುಮಾನವನ್ನು ಶಾಸಕರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ