ಮಧ್ಯಪ್ರದೇಶದ ರೆಬೆಲ್ ಶಾಸಕರ ಸಂಪರ್ಕ ಸಾಧಿಸಲು ಡಿಕೆಶಿ ಮೊರೆಹೋದ ದಿಗ್ವಿಜಯ್ ಸಿಂಗ್

ಮಂಗಳವಾರ, 10 ಮಾರ್ಚ್ 2020 (10:55 IST)
ಬೆಂಗಳೂರು : ಮಧ್ಯಪ್ರದೇಶ ರಾಜ್ಯದಲ್ಲಿ ರಾಜಕೀಯ ನಿಶ್ಚಿತತೆ ಹಿನ್ನಲೆ ಬೆಂಗಳೂರಿನಲ್ಲಿರುವ ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಲು ನಾಯಕರು ಯತ್ನ ನಡೆಸುತ್ತಿದ್ದಾರೆ.

ಬೆಂಗಳೂರಿನಲ್ಲಿರುವ ಶಾಸಕರನ್ನು ಸಂಪರ್ಕಿಸಲು ಸಾಧ್ಯವೇ? ಎಂಬ ಅನುಮಾನ ವ್ಯಕ್ತವಾಗಿರುವ ಬೆನ್ನಲೇ ಇದೀಗ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಇಯ್ ಸಿಂಗ್ ಡಿಕೆ ಶಿವಕುಮಾರ್ ಜತೆ ರೆಬೆಲ್ ಶಾಸಕರ ಸಂಪರ್ಕ ಸಾಧಿಸುವ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ. ಅಲ್ಲದೇ 2 ದಿನಗಳ ಹಿಂದೆ ದೆಹಲಿಗೆ ತೆರಳಿದ್ದಾಗಲೂ ಕೂಡ ಈಬಗ್ಗೆ ಡಿಕೆ ಶಿವಕುಮಾರ್ ಜತೆ ಚರ್ಚೆ ನಡೆಸಿದ್ದರು ಎನ್ನಲಾಗಿದೆ.

 

ಬಂಡಾಯ ಶಾಸಕರ ನೇತೃತ್ವ ಜ್ಯೋತಿರಾದಿತ್ಯ ವಹಿಸಿದ್ದು, ಮಧ್ಯಪ್ರದೇಶದ ಶಾಸಕರು ಎರಡು ಕಡೆ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ ದೊಡ್ಡಬಳ್ಳಾಪುರ ರಸ್ತೆಯ ಸಂಗ್ಸಾನಾ ರೆಸಾರ್ಟ್ ನಲ್ಲಿ ಕೆಲವರು ಇದ್ದರೆ, ಇನ್ನು ಕೆಲವರು  ವೈಟ್ ಫೀಲ್ಡ್ ಬಳಿಯ ಫಾಮ್ ಮಿಡೋಸ್ ನಲ್ಲಿ ವಾಸ್ತವ್ಯ  ಹೂಡಿದ್ದಾರೆ ಎನ್ನಲಾಗಿದೆ.  

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ