ಮೈಲಾರಲಿಂಗೇಶ್ವರ ದೇಗುಲಕ್ಕೆ ಬೆಳ್ಳಿಯ ಹೆಲಿಕಾಪ್ಟರ್ ನೀಡಿದ ಡಿಕೆಶಿ. ಕಾರಣವೇನು ಗೊತ್ತಾ?

ಶುಕ್ರವಾರ, 18 ಡಿಸೆಂಬರ್ 2020 (11:42 IST)
ಬಳ್ಳಾರಿ : ಪಾಪ ಪ್ರಾಯಶ್ಚಿತ್ತಕ್ಕಾಗಿ ಬಳ್ಳಾರಿ ಜಿಲ್ಲೆಯ ಮೈಲಾರಲಿಂಗೇಶ್ವರ ದೇಗುಲಕ್ಕೆ ಭೇಟಿ ನೀಡಿದ ಡಿಕೆಶಿವಕುಮಾರ್  ಅವರು ಬೆಳ್ಳಿಯ ಹೆಲಿಕಾಪ್ಟರ್ ನೀಡಿ ಹರಕೆಯನ್ನು ತೀರಿಸಿದ್ದಾರೆ.

2018ರಲ್ಲಿ  ದೇಗಲಕ್ಕೆ ಹೆಲಿಕಾಪ್ಟರ್ ನಲ್ಲಿ ಬಂದಿದ್ದ ಡಿಕೆಶಿ ಭಕ್ತರ ಚಿತ್ತಕ್ಕೆ ಭಂಗ ತಂದಿದ್ದರು. ಆ ವೇಳೆ ಡಿಕೆಶಿ ಜೊತೆ ಪರಮೇಶ್ವರ್ ನಾಯ್ಕ್ ಕೂಡ ಬಂದಿದ್ದರು. ಇದರಿಂದ  ದೇವರ ಶಾಪಕ್ಕೆ ಗುರಿಯಾಗಿದ್ದ ಕಾರಣ ಪರಮೇಶ್ವರ್ ನಾಯ್ಕ್ ಮಂತ್ರಿಗಿರಿ ಕಳೆದುಕೊಂಡರು, ಡಿಕೆಶಿ ಜೈಲು ಸೇರಿದ್ರು.

ಹಾಗಾಗಿ ಇದು ಮೈಲಾರಲಿಂಗನ ಶಾಪ ಎಂದು ಧರ್ಮದರ್ಶಿ ಹೇಳಿದ ಹಿನ್ನಲೆಯಲ್ಲಿ. ಇಂದು ದೇವರ ದರ್ಶನ ಮಾಡಿದ ಡಿಕೆಶಿ  1 ಕೆಜಿ ತೂಕದ ಬೆಳ್ಳಿಯ ಹೆಲಿಕಾಪ್ಟರ್ ನೀಡಿ ಹರಕೆ ತೀರಿಸಿದ್ದಾರೆ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ