ಸಂಪತ್ ರಾಜ್ ರಕ್ಷಣೆಗೆ ನಿಂತ ಕೆಪಿಸಿಸಿ ಅಧ್ಯಕ್ಷ ಡಿಕೆಶಿ

ಮಂಗಳವಾರ, 17 ನವೆಂಬರ್ 2020 (12:15 IST)
ಬೆಂಗಳೂರು : ಸಂಪತ್ ರಾಜ್ ಬಂಧನದ ಬಳಿಕ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಸಂಪತ್ ರಾಜ್ ರಕ್ಷಣೆಗೆ ಮುಂದಾಗಿದ್ದು, ಅವರ ಪರವಾಗಿ ಬ್ಯಾಟ್ ಬೀಸಿದ್ದಾರೆ.

ವೈಯಕ್ತಿಕ ಹೇಳಿಕೆ ಮೇಲೆ ಕ್ರಮ ಸಾಧ್ಯವಿಲ್ಲ. ಏನೇ ಸಮಸ್ಯೆ ಇದ್ದರೂ ನನ್ನ ಬಳಿ ಮಾತಾಡಲಿ. ಕೆಪಿಸಿಸಿ ಕಚೇರಿ ಅಥವಾ ನನ್ನ ಮನೆಗೆ ಬಂದು ಮಾತಾಡಲಿ ಎಂದು ಅಖಂಡ ಶ್ರೀನಿವಾಸ್ ವಿರುದ್ಧವೇ ಡಿಕೆಶಿ ಗರಂ ಆಗಿದ್ದಾರೆ.

ಸಂಪತ್ ರಾಜ್ ಓಡಿ ಹೋಗಿರಲಿಲ್ಲ. ಆರೋಗ್ಯ ಸರಿ ಇರಲಿಲ್ಲ. ಸಂಪತ್ ರಾಜ್ ಓಡಿ ಹೋದ್ರು ಅಂತ ಹೇಗೆ ಹೇಳ್ತಿರಿ? ಕಾಂಗ್ರೆಸ್ ಎಲ್ಲ ನಾಯಕರನ್ನು ಮುಗಿಸಬೇಕೆಂಬ ಹುನ್ನಾರ ಮಾಡಲಾಗುತ್ತಿದೆ,  ಬಿಜೆಪಿ ನಾಯಕರು ದುರುಪಯೋಗ ಮಾಡಿಕೊಳ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಡಿಕೆಶಿ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ