ಸಿಎಂ ಮನವಿಯನ್ನು ತಿರಸ್ಕರಿಸಿದ ಅತೃಪ್ತರು

ಸೋಮವಾರ, 22 ಜುಲೈ 2019 (10:42 IST)
ಬೆಂಗಳೂರು : ಸಿಎಂ ಕುಮಾರಸ್ವಾಮಿ ಅವರು ಅತೃಪ್ತರಿಗೆ ಮರಳಿ ಬರುವಂತೆ ಆಹ್ವಾನ ನೀಡಿದ್ದರೂ ಅತೃಪ್ತರು ಸಿಎಂ ಆಹ್ವಾನಕ್ಕೆ ಕ್ಯಾರೆ ಮಾಡದೆ  ತಿರಸ್ಕರಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.



ಇಂದು ಸದನದಲ್ಲಿ ವಿಶ್ವಾಸಮತ ಸಾಬೀತಿಗೆ ಬಿಜೆಪಿ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಸಿಎಂ ಕುಮಾರಸ್ವಾಮಿ, ನಿಮ್ಮ ಸಮಸ್ಯೆಗಳ  ಬಗ್ಗೆ ಒಟ್ಟಾಗಿ  ಕುಳಿತು ಚರ್ಚೆ ಮಾಡೋಣ. ಅದಕ್ಕೆ ಪರಿಹಾರ ಕಂಡುಕೊಳ್ಳೋಣ ಬನ್ನಿ  ಎಂದು ಅತೃಪ್ತರಿಗೆ ಸಂದೇಶ ರವಾನಿಸಿದ್ದರು.


ಆದರೆ ಸಿಎಂ ಮನವಿಗೆ ಒಪ್ಪದ ಅತೃಪ್ತರು, ನಮ್ಮ ನಿರ್ಧಾರದಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ ಎಂದು ವಾಪಾಸ್ ಹೋಗದಿರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ