ಐಟಿ ದಾಳಿ ಬಳಿಕ ಡಿಕೆಶಿ ಮೊದಲು ಭೇಟಿ ಮಾಡಿದ್ದು ಯಾರನ್ನ ಗೊತ್ತಾ..?

ಶನಿವಾರ, 5 ಆಗಸ್ಟ್ 2017 (11:47 IST)
ಐಟಿ ದಾಳಿ ಮುಗಿದ ಬಳಿಕ ಮನೆಯಿಂದ ಹೊರಬಂದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಕುಟುಂಬ ಸಮೇತ ಇಷ್ಟದೈವದ ದರ್ಶನಕ್ಕೆ ತೆರಳಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ತಾವು ನಂಬಿರುವ ನೊಣವಿನಕೆರೆಯ ಅಜ್ಜಯ್ಯನ ದರ್ಶನಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಡಿ.ಕೆ. ಶಿವಕುಮಾರ್ ಬರುವ ಹಿನ್ನೆಲೆಯಲ್ಲಿ ಅಜ್ಜಯ್ಯನವರು ವಿಜಯನಗರಕ್ಕೆ ಆಗಮಿಸಿದ್ದು. ಕುಟುಂಬ ಸಮೇತರಾಗಿ ಡಿ.ಕೆ. ಶಿವಕುಮಾರ್ ಅಜ್ಜಯ್ಯ ಅವರನ್ನ ಭೇಟಿ ಮಾಡಿದ್ದಾರೆ. ಕಾಡಸಿದ್ದೇಶ್ವರ ಮಠದ ಅಜ್ಜಯ್ಯನವರನ್ನ ಡಿಕೆಶಿ ಭೇಟಿ ಮಾಡಿದ್ದಾರೆ.

ಐಟಿ ದಾಳಿಯಿಂದ ಸಂಕಷ್ಟದಲ್ಲಿರುವ ಡಿ.ಕೆ. ಶಿವಕುಮಾರ್ ಮುಂದಿನ ನಿರ್ಧಾರಗಳನ್ನ ಕೈಗೊಳ್ಳುವ ಮುನ್ನ ಅಜ್ಜಯ್ಯನವರನ್ನ ಭೇಟಿ ಮಾಡಿದ್ದಾರೆ. ಪುತ್ರಿ ಜೊತೆ ಆಗಮಿಸಿದ ಡಿ.ಕೆ. ಶಿವಕುಮಾರ್, ಅಜ್ಜಯ್ಯನವರಿಗೆ ಪಾದಪೂಜೆ ನೆರವೇರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕಬ್ಬಾಳಮ್ಮ ದೇವಿ ಮೇಲೆ ಇಟ್ಟಿರುವಷ್ಟೇ ಭಕ್ತಿಯನ್ನ ಡಿಕೆಶಿ, ಅಜ್ಜಯ್ಯನವರ ಮೇಲೂ ಇಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ