ನೀವು ರಾಜ್ಯದ ಸಿಎಂ ಆಗುತ್ತೀರಿ ಎಂದು ಡಿಕೆಶಿಗೆ ಹೇಳಿದ್ಯಾರು ಗೊತ್ತಾ?

ಸೋಮವಾರ, 29 ಮಾರ್ಚ್ 2021 (12:45 IST)
ಬೆಂಗಳೂರು : ನೀವು ರಾಜ್ಯದ ಸಿಎಂ ಆಗುತ್ತೀರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಹಲಗಾ ಗ್ರಾಮದ ಬಾಲ ಆಚಾರ್ಯ ಸಿದ್ಧ ಸೇನಾ ಜೈನ ಮುನಿ ಆಶೀರ್ವಾದ ಮಾಡಿದ್ದಾರೆ.

ವಿರೋಧಿಗಳು ಹೆಚ್ಚಾದಂತೆ ನೀವು ಬೆಳೆಯುತ್ತೀರಿ, ಸಿಎಂ ಆಗ್ತೀರಿ. ನೀವು ಕನಕಪುರದ ಬಂಡೆ, ಕಲ್ಲು ಕೆತ್ತಿ ಕೆತ್ತಿ ,ಮೂರ್ತಿ ಆಗಿದೆ. ವಿರೋಧಿಗಳು ಹೆಚ್ಚಾದಷ್ಟೂ ನೀವು ಉತ್ತಮವಾದ ಮೂರ್ತಿ ಆಗ್ತೀರಿ. ರಾಜ್ಯದ ಸಿಎಂ ಆಗುತ್ತೀರಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಜೈನ ಮುನಿ ಆಶೀರ್ವಾದ ಮಾಡಿದ್ದಾರೆ.

ಸಿಡಿ ಕೇಸ್ ನಲ್ಲಿ ಡಿಕೆಶಿ ಕೈವಾಡವಿದೆ ಎಂದು ಹಲವರು ಆರೋಪಿಸುತ್ತಿದ್ದ ಹಿನ್ನಲೆಯಲ್ಲಿ ಬೇಸರಗೊಂಡಿದ್ದ ಡಿಕೆ ಶಿವಕುಮಾರ್ ಅವರಿಗೆ ಜೈನ ಮುನಿ ಈ ರೀತಿ ಸಮಾಧಾನ ಮಾಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ