ಎಲೆಕ್ಷನ್ ನಲ್ಲಿ ಎಂಇಎಸ್ ನ ಹೊಸ ಕುತಂತ್ರ ಏನ್ ಗೊತ್ತಾ?

ಸೋಮವಾರ, 1 ಏಪ್ರಿಲ್ 2019 (16:51 IST)
ಎಲೆಕ್ಷನ್ ಟೈಮ್ ನಲ್ಲಿಯೂ ಎಂಇಎಸ್ ತನ್ನ ಕುತಂತ್ರಕ್ಕೆ ಮೊರೆ ಹೋಗಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದಿಂದ 101ನಾಮಪತ್ರ ಸಲ್ಲಿಕೆ ಮಾಡಿ ಜೀವಂತವಾಗಿದ್ದೇವೆ ಎಂಬುದನ್ನ ತೋರಿಸಲು ನಾಡದ್ರೋಹಿ ಎಂಇಎಸ್ ಮುಖಂಡರು ಮುಂದಾಗಿದ್ದಾರೆ. ಈ ಕಾರಣಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಎಂಇಎಸ್ ಮುಖಂಡರು ನಾಮಪತ್ರ ಅರ್ಜಿಯನ್ನ ಮರಾಠಿಯಲ್ಲಿ ನೀಡಬೇಕೆದು ಒತ್ತಾಯ ಮಾಡಿ ಡಿಸಿ ಅವರಿಗೆ ಮನವಿ ಸಲ್ಲಿಸಿದರು. ಈ ಮೂಲಕ ಮತ್ತೆ ಕ್ಯಾತೆಯನ್ನ ತೆಗೆಯಲು ಮುಂದಾಗಿದ್ದಾರೆ.

ಇನ್ನೂ 101 ಅಭ್ಯರ್ಥಿಗಳನ್ನ ಹುಡುಕಲು ಕೂಡ ಮಾಸ್ಟರ್ ಪ್ಲಾನ್ ಮಾಡಿರುವ ಎಂಇಎಸ್ ಮುಖಂಡರು ಲೋಕಸಭೆ ಚುನಾವಣೆಯ ನಂತರ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದ್ದು, ಸದಸ್ಯರಿಗೆ ಟಿಕೆಟ್ ಬೇಕು ಅಂದ್ರೇ ಈಗ ನಾಮಪತ್ರ ಸಲ್ಲಿಸಬೇಕೆಂದು ಪಾಲಿಕೆ ಟಿಕೆಟ್ ಆಕಾಂಕ್ಷಿಗಳಿಗೆ ಸೂಚನೆ ನೀಡಿದ್ದಾರೆ.

ಈ ನಿಟ್ಟಿನಲ್ಲಿ ಸದ್ಯ 101 ಅಭ್ಯರ್ಥಿಗಳ ಆಯ್ಕೆ ಮಾಡಿರುವ ಎಂಇಎಸ್ ಮುಖಂಡರು, ಡಿಸಿ ಅವರ ಬಳಿಗೆ ಬಂದು ಮರಾಠಿಯಲ್ಲಿ ಅರ್ಜಿಗಳನ್ನ ನೀಡಿ ಎಂದು ಕೇಳಿಕೊಂಡಿದ್ದಾರೆ. ಇನ್ನೂ ಏಪ್ರಿಲ್ 2ರಂದು ಎಲ್ಲಾ ಅಭ್ಯರ್ಥಿಗಳು ಒಂದೇ ದಿನ ನಾಮಪತ್ರ ಸಲ್ಲಿಸುವ ಪ್ಲ್ಯಾನ್ ಕೂಡ ಮಾಡಿಕೊಂಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ