ಕೆರೆಗೆ ಬಿದ್ದು ನಾಲ್ವರು ಸ್ನೇಹಿತರು ಸಾವನ್ನಪ್ಪಿರುವುದಕ್ಕೆ ಅಸಲಿ ಕಾರಣವೇನು ಗೊತ್ತಾ?

ಮಂಗಳವಾರ, 12 ನವೆಂಬರ್ 2019 (12:05 IST)
ಹುಬ್ಬಳ್ಳಿ : ಹುಬ್ಬಳ್ಳಿಯ ದೇವರಗುಡಿಹಾಳ ಗ್ರಾಮದ ಕೆರೆಯಲ್ಲಿ ಈಜಲು ಹೋಗಿ ನಾಲ್ವರು ಸ್ನೇಹಿತರು ನೀರುಪಾಲಾದ ಘಟನೆಗೆ ಸಂಬಂಧಿಸಿದಂತೆ  ಅಸಲಿ ಕಾರಣ ಏನೆಂಬುದು ತಿಳಿದುಬಂದಿದೆ.




7 ಮಂದಿ ಸ್ನೇಹಿತರು ಕೆರೆಗೆ ಇಳಿದ ಹಿನ್ನಲೆಯಲ್ಲಿ  ಈಜುಬಾರದೇ ನಾಲ್ವರು  ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬಳಿಕ ಅವರ ಮೃತದೇಹವನ್ನು ಹೊರಗೆಯಲಾಗಿದೆ.


ಈ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಉಳಿದ ಸ್ನೇಹಿತರನ್ನು ವಿಚಾರಣೆ ನಡೆಸಿದಾಗ ಮೃತರಲ್ಲಿ ಒಬ್ಬ ಪಬ್ ಜಿ ಗೇಮ್ ಆಡುತ್ತಾ ನೀರಿಗೆ ಬಿದ್ದಿದ್ದು, ಅವನನ್ನು ಕಾಪಾಡಲು ಹೋಗಿ ಮೂವರು ಕೂಡ ನೀರಿನಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ ಎಂಬ ವಿಚಾರ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ