ದೋಸೆ ಮೇಲಿನ ಆಸೆಯಿಂದ ಸಚಿವ ಸಂತೋಷ್ ಲಾಡ್ ಮಾಡಿದ್ದೇನು ಗೊತ್ತಾ...?

ಭಾನುವಾರ, 21 ಜನವರಿ 2018 (11:31 IST)
ಮೈಸೂರು : ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕಾರ್ಯಕ್ರಮವೊಂದಕ್ಕೆ ಮೈಸೂರಿಗೆ ಆಗಮಿಸಿದಾಗ ಹೋಟೆಲ್ ಒಂದರಲ್ಲಿ ತಿಂಡಿ ಸೇವಿಸುವಾಗ ಪಾದಚಾರಿ ಮಾರ್ಗದಲ್ಲಿ ಕುಳಿತು ತಿಂದಿದ್ದಾರೆ.

 
ಮೈಸೂರಿನ ಹೋಟೆಲ್ ಮೈಲಾರಿ ದೋಸೆಗೆ ಫೇಮಸ್ ಆಗಿದ್ದು, ಅದು ತುಂಬಾ ಚಿಕ್ಕದಾಗಿರುವ ಕಾರಣ 10 ಜನ ಕುಳಿತುಕೊಂಡರೆ ಹೌಸ್ ಫುಲ್ ಆಗುತ್ತಿತ್ತು. ಆದ್ದರಿಂದ ಕಾರ್ಮಿಕ ಸಚಿವರು ಕೆಲ ಸ್ಥಳೀಯ ಮುಖಂಡರ ಜೊತೆ ತಿಂಡಿ ತಿನ್ನಲು ಆ ಹೋಟೆಲ್ ಗೆ  ಹೋದಾಗ ಒಳಗೆ ಕುಳಿತುಕೊಳ್ಳಲು ಸ್ಥಳವಿರದ ಕಾರಣ ಅವರು ದೋಸೆ ತರಿಸಿಕೊಂಡು ಹೊರಗಡೆ ಪಾದಚಾರಿ ಮಾರ್ಗದಲ್ಲೇ ಕುಳಿತು ತಿಂಡಿ ತಿಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ