ಸಿ.ಎಂ ವಿರುದ್ಧ ಶಾಸಕ ಸಿ.ಟಿ. ರವಿ ಟ್ವೀಟ್ ಮಾಡಿದ್ದೇನು ಗೊತ್ತಾ?

ಭಾನುವಾರ, 23 ಸೆಪ್ಟಂಬರ್ 2018 (18:09 IST)
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಧ್ಯ ಅಧಿಕಾರಕ್ಕಾಗಿ ಸಿ.ಎಂ ಟೆಂಪಲ್ ರನ್ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ.

ಅಂದು ದತ್ತಾತ್ರೇಯ ದರ್ಶನ ಮಾಡುವರು ಭಿಕ್ಷುಕರು ಎಂದಿದ್ದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದು ಅಧಿಕಾರ ಉಳಿಸಿಕೊಳ್ಳಲು ಅದೇ ದತ್ತಾತ್ರೇಯ ದೇವರು ಬೇಕಾಗಿತ್ತೇ ಎಂದು ಟ್ವೀಟ್ ಮಾಡಿದ್ದಾರೆ.

ದತ್ತಾತ್ರೇಯ ದೇವರ ದರ್ಶನಕ್ಕೆ ಸಿಎಂ ಹೋಗಿದ್ದಕ್ಕೆ ಈ ಟ್ವೀಟ್ ಮಾಡಿರುವ ಅವರು, ಸಾಂದರ್ಭಿಕ ಶಿಶುಗಳೇ 
ಎಂದು ಟ್ವಿಟರ್ ನಲ್ಲಿ ಸಿ.ಎಂ ವಿರುದ್ಧ ಕುಟುಕಿದ್ದಾರೆ.

ವಿಧಾನಸಭೆ ಚುನಾವಣೆ ವೇಳೆ ಮೂಡಿಗೆರೆಯಲ್ಲಿ ದತ್ತಾತ್ರೇಯ ದರ್ಶನ ಮಾಡುವರು ಭಿಕ್ಷುಕರು ಎಂದು ಹೇಳಿದ್ದ ಸಿ.ಎಂ ಕುಮಾರಸ್ವಾಮಿ ಹೇಳಿಕೆಗೆ ಈಗ ಶಾಸಕ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ