ತಂದೆಯನ್ನು ಗಲ್ಲಿಗೇರಿಸಿ ಎಂದ ಮಗಳು ಹೇಳಿದ್ದೇಕೆ ಗೊತ್ತಾ?

ಬುಧವಾರ, 26 ಸೆಪ್ಟಂಬರ್ 2018 (18:17 IST)
ನನ್ನ ತಂದೆಯನ್ನು ಗಲ್ಲಿಗೇರಿಸಿ ಎಂದು ಸರಕಾರಕ್ಕೆ ನೊಂದ ಯುವತಿ ಆಗ್ರಹ ಮಾಡಿದ್ದಾಳೆ.

ನನ್ನ ತಂದೆಗೆ ಗಲ್ಲು ಶಿಕ್ಷೆ ನೀಡಿ, ಅವರನ್ನು ಗಲ್ಲಿಗೆ ಏರಿಸಿ ಎಂದು ನೊಂದ ಯುವತಿ ಸರಕಾರಕ್ಕೆ ಒತ್ತಾಯಿಸಿದ್ದಾಳೆ. ತಾನು ಗರ್ಭಿಣಿ ಎನ್ನುವುದನ್ನೂ ಲೆಕ್ಕಿಸದೇ ನನ್ನ ಕಣ್ಣ ಮುಂದೆಯೇ ನನ್ನ ಗಂಡ ದಲಿತ ಸಮುದಾಯಕ್ಕೆ ಸೇರಿದವನು ಎನ್ನುವ ಕಾರಣಕ್ಕೆ ಕೊಲೆ ಮಾಡಿದ್ದಕ್ಕೆ ಯುವತಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ಮೇಲ್ಜಾತಿ ವರ್ಗದ ಅಮೃತವರ್ಷಿಣಿ (21) ಮತ್ತು ದಲಿತ ಕ್ರೈಸ್ತ ಸಮುದಾಯದ ಪ್ರಣಯ್ (23) ಪ್ರೀತಿಸಿ ಮದುವೆಯಾಗಿದ್ದರು. ಇದನ್ನು ಅಮೃತಾಳ ತಂದೆ ಮಾರುತಿರಾವ್ ವಿರೋಧ ಮಾಡಿದ್ದರು. ಯುವಕ ಕೆಳಜಾತಿಯವ ಎಂಬ ಕಾರಣಕ್ಕೆ ಮಗಳು ಗರ್ಭಿಣಿ ಎನ್ನುವುದನ್ನು ಲೆಕ್ಕಿಸದೇ ಸೆ.14ರಂದು ಸುಫಾರಿ ಹಂತಕರಿಂದ ಕೊಲೆ ಮಾಡಿಸಿದ್ದ ಆರೋಪ ಕೇಳಿಬಂದಿತ್ತು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ