ನೂತನ ಸಚಿವರ ಮುಂದೆ ಸಂಸದರಿಬ್ಬರ ವಾಗ್ವಾದ ನಡೆದದ್ದು ಏಕೆ ಗೊತ್ತಾ?

ಮಂಗಳವಾರ, 25 ಡಿಸೆಂಬರ್ 2018 (14:13 IST)
ನೂತನ ಸಚಿವ ಸತೀಶ್ ಜಾರಕಿಹೊಳಿ ಅವರ ಸಮ್ಮುಖದಲ್ಲಿಯೇ ಸಂಸದರಿಬ್ಬರ ಮಾತಿನ ಚಕಮಕಿ ನಡೆದಿದೆ.
ಆಮಂತ್ರಣ ಪತ್ರಿಕೆಯಲ್ಲಿ ಹೆಸರಿಲ್ಲದಕ್ಕೆ ಕೋಪಗೊಂಡ ರಾಜ್ಯ ಸಬೆ ಸದಸ್ಯ ಪ್ರಭಾಕರ್ ಕೋರೆ ಗರಂ ಆಗಿದ್ದರು. ಈ ವೇಳೆ ರೇಲ್ವೆ ಅಧಿಕಾರಿಗಳನ್ನು ಪ್ರಭಾಕರ ಕೋರೆ ಅವರು ತರಾಟೆಗೆ ತಗೆದುಕೊಂಡ ಘಟನೆ ನಡೆಯಿತು.

ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಇಲ್ಲದ ಕಾರಣಕ್ಕಾಗಿ ವೇದಿಕೆಗೆ ಬರಲು ಹಿಂದೇಟು ಹಾಕಿದರು. ಆಗ ಸಂಸದ  ಸುರೇಶ್ ಅಂಗಡಿ ಮತ್ತು ಪ್ರಭಾಕರ್ ಕೋರೆ ನಡುವೆ ಮಾತಿನ ಚಕಮಕಿ ನಡೆಯಿತು.  

ನಂತರ  ಪ್ರಭಾಕರ ಕೋರೆ ಕೈ  ಹಿಡಿದು ಸಂಸದ ಸುರೇಶ ಅಂಗಡಿ ಎಳೆದುಕೊಂಡು ಹೋದರು.  
ಜನರ ಮದ್ಯದಲ್ಲೆ ಜಗಳವಾಡಿಕೊಂಡ ನಾಯಕರು ಮಾತಿನ ಚಕಮಕಿಯು ಅವರ ಹಿಂಬಾಲಕರಲ್ಲಿ ಕೊಂಚ ಆತಂಕಕ್ಕೆ ಕಾರಣವಾಗಿತ್ತು. ಇವರ ಜಗಳ ನೋಡಿ ಮೂಕ ವೀಕ್ಷಕರಾದ ಸಚಿವ ಸತೀಶ ಜಾರಕಿಹೋಳಿ ನಿಂತಿದ್ದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ