ಸಿಎಂ ಕುರ್ಚಿ ಅಂಗಡಿಯಲ್ಲಿ ಮಾರಾಟಕ್ಕಿರುವ ವಸ್ತುನಾ?: ಯಡ್ಡಿಗೆ ಕಾಗೋಡು ಲೇವಡಿ

ಬುಧವಾರ, 26 ಅಕ್ಟೋಬರ್ 2016 (17:14 IST)
ಮುಂದಿನ ಮುಖ್ಯಮಂತ್ರಿ ನಾನೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಕುರ್ಚಿ ಅಂಗಡಿಯಲ್ಲಿ ಮಾರಾಟಕ್ಕಿರುವ ವಸ್ತುನಾ? ಮುಖ್ಯಮಂತ್ರಿ ಆಯ್ಕೆ ಕುರಿತು ರಾಜ್ಯದ ಜನತೆ ನಿರ್ಧಾರ ಕೈಗೊಳ್ಳುತ್ತಾರೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಬಿಎಸ್‌ವೈಗೆ ಟಾಂಗ್ ನೀಡಿದ್ದಾರೆ. 
 
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ನಿರ್ದೋಷಿ ಎಂದು ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿದೆ. ಅದರಲ್ಲಿ ವಿಶೇಷವಾದದ್ದು ಏನಿದೆ. ನ್ಯಾಯಾಲಯದಲ್ಲಿ ಸಿಕ್ಕಿರುವ ಜಯವನ್ನು ರಾಜಕೀಯವಾಗಿ ಬಳಸಲು ಬಿಜೆಪಿ ಮುಂದಾಗಿದೆ ಎಂದು ಕಿಡಿಕಾರಿದರು. 
 
ಮುಂದಿನ ಸಿಎಂ ನಾನೇ ಎಂದು ಬಿಎಸ್‌ವೈ ಹೇಳಬಹುದು. ಅದೇನು ಅಂಗಡಿಯಲ್ಲಿ ಸಿಗುವ ಸಾಮಾನೇ. ಇದನ್ನೆಲ್ಲ ರಾಜ್ಯದ ಜನತೆ ನಂಬಲ್ಲ. ಜನರ ಮುಂದೆ ಹೋಗೋಕೆ ಬೇರೆ ವಿಚಾರ ಇದೆ. ಇಂತಹ ವಿಷಯಗಳನ್ನು ಕಾಂಗ್ರೆಸ್‌ನವರು ಪ್ರಸ್ತಾಪಿಸಲ್ಲ. ಮುಂದೇನಾಗುತ್ತೇ ನೋಡೋಣ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಾರ್ಮಿಕವಾಗಿ ನುಡಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ