ರಾಜ್ಯ ಬಿಜೆಪಿ ಬಗ್ಗೆ ನನ್ನ ಕೇಳಬೇಡಿ: ರಮೇಶ್ ಜಿಗಜಿಣಗಿ

ಶುಕ್ರವಾರ, 13 ಜನವರಿ 2017 (16:09 IST)
ರಾಜ್ಯ ಬಿಜೆಪಿ ಪಾಳಯದ ಆಂತರಿಕ ವಿಷಯಗಳ ಬಗ್ಗೆ ನನ್ನ ಕೇಳಬೇಡಿ. ಅದೆಲ್ಲ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಬಿಟ್ಟ ವಿಷಯ ಎಂದು ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಪತ್ರಕರ್ತರ ಬಳಿ ಮನವಿ ಮಾಡಿಕೊಂಡಿದ್ದಾರೆ. 
ವಿಜಯಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಪಾಳಯದ ಆಂತರಿಕ ವಿಷಯಗಳ ಬಗ್ಗೆ ನನ್ನ ಕೇಳಬೇಡಿ. ಅಭಿವೃದ್ಧಿ ವಿಷಯದ ಕುರಿತು ಬೇಕಿದ್ದರೆ ಕೇಳಿ. ರಾಜ್ಯ ಬಿಜೆಪಿ ಪಾಳಯದಲ್ಲಿ ಉಂಟಾಗುತ್ತಿರುವ ಆಂತರಿಕ ಬಿಕ್ಕಟ್ಟಿನ ಕುರಿತು ಅಮಿತ್ ಶಾ ಕ್ರಮ ಕೈಗೊಳ್ಳಲಿದ್ದಾರೆ ಎಂದರು. 
 
ತಾವು ಗಾಂಧಿ ಟೋಪಿ ಧರಿಸುವುದನ್ನು ಬಿಟ್ಟಿರುವ ಕುರಿತು ಪತ್ರಕರ್ತರು ಪ್ರಶ್ನೆಗೆ ಉತ್ತರಿಸಿದ ಅವರು, ಬದಲಾವಣೆಗಾಗಿ ಗಾಂಧಿ ಟೋಪಿಯನ್ನು ಧರಿಸುವುದನ್ನು ಬಿಟ್ಟಿರುವುದಾಗಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ತಿಳಿಸಿದರು.
 
ರಾಜ್ಯ ಬಿಜೆಪಿ ಪಾಳಯದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತದೆ ಎಂಬ ಕಾರಣಕ್ಕಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹೆಸರಿನ ಹೊಸ ಸಂಘಟನೆ ಹುಟ್ಟು ಹಾಕುವ ಮೂಲಕ ಪಕ್ಷದಲ್ಲಿ ತಮ್ಮ ಬಲ ಪ್ರದರ್ಶನ ಮಾಡಲು ಕೆ.ಎಸ್.ಈಶ್ವರಪ್ಪ ಮುಂದಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ