ಹೋಮ್ ಸ್ಟೇವೊಂದರಲ್ಲಿ ತೇಜಸ್ ಗೌಡ ಮತ್ತು ಆತನ ಸ್ನೇಹಿತರು ಇಸ್ಪೇಟ್ ಆಡುತ್ತಿದ್ದರು. ಈ ಸಮಯದಲ್ಲಿ ದಾಳಿ ನಡೆಸಿದ ಪೊಲೀಸರು ಅವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ತೇಜಸ್ ಜಾಮೀನು ಪಡೆದುಕೊಂಡು ಜೈಲಿನಿಂದ ಹೊರಬಂದಿದ್ದು, ನಂತರ ಜೂನ್ 27ರಂದು ಅವರನ್ನು ಅಪಹರಿಸಲಾಗಿತ್ತು.
ನಂತರ ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ 10 ಲಕ್ಷ ರೂಪಾಯಿ ಹಣ ತಲುಪಿಸುವಂತೆ ಕರೆ ಮಾಡಿ ತಿಳಿಸಿದ್ದರು. ತೇಜಸ್ ಸ್ನೇಹಿತ ಪವನ್ 10 ಲಕ್ಷ ರೂಪಾಯಿ ತಲುಪಿಸಿದ್ದ. ನಂತರ ತೇಜಸ್ ಡಿವೈಎಸ್ಪಿ ವಿರುದ್ಧ ದೂರು ದಾಖಲಿಸಿದ್ದು, ತನಿಖೆಯ ಬಳಿಕ ವಿಷಯ ಬಹಿರಂಗವಾಗಿತ್ತು.