ಸಿಎಂ ಬೀದಿ ದಾಸಯ್ಯನ ರೀತಿ ಮಾತನಾಡುತ್ತಾರೆ: ಕೆಎಸ್ ಈಶ್ವರಪ್ಪ

ಭಾನುವಾರ, 24 ಸೆಪ್ಟಂಬರ್ 2017 (11:02 IST)
ಬೆಂಗಳೂರು: ಬಿಜೆಪಿ ಪಕ್ಷ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಮೀಟಿರಲ್ಲ ಎಂದು ಹೇಳಿಕೆ ನೀಡಿದ್ದ ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರತಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ತಿರುಗಿಬಿದ್ದಿದ್ದಾರೆ.

 
ಸಿಎಂ ಸಿದ್ದರಾಮಯ್ಯ ಬೀದಿ ದಾಸಯ್ಯ ಎಂದು ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಸಿಎಂ ಸಿದ್ದು ಬೀದಿ ದಾಸಯ್ಯನಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ಜರೆದಿದ್ದಾರೆ.

ಮೀಟರಿಲ್ಲ ಎಂಬ ಹೇಳಿಕೆ ನೀಡಿರುವ ಸಿಎಂ ತಕ್ಷಣವೇ ಬಿಜೆಪಿ ಮತ್ತು ಬಿಎಸ್ ವೈ ಕ್ಷಮೆ ಕೇಳಬೇಕೆಂದು ಅವರು ಆಗ್ರಹಿಸಿದ್ದಾರೆ. ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡುವಾಗ ಬಿಎಸ್ ವೈ ಮತ್ತು ಬಿಜೆಪಿಗೆ ಮೀಟರಿಲ್ಲ. ಉತ್ತರನ ಪೌರುಷ ಇಲ್ಲಿ ಮಾತ್ರ ತೋರಿಸುತ್ತಾರೆ ಎಂದಿದ್ದರು.

ಇದನ್ನೂ ಓದಿ.. ‘ಮಹಿರಾ ಖಾನ್ ಜತೆ ರಣಬೀರ್ ದಮ್ ಎಳೆದರೆ ತಪ್ಪೇನು?’
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ