ಸಾವು, ಬದುಕಿನ ನಡುವೆ ಹೋರಾಟದಲ್ಲಿ ಬದುಕಲಿಲ್ಲ ಸಂಜನಾ…

ಗುರುವಾರ, 19 ಅಕ್ಟೋಬರ್ 2017 (17:57 IST)
ಬೆಂಗಳೂರು: ಈಜಿಪುರ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಾಡ ಸದೃಶ ಪಾರಾಗಿದ್ದ ಮೂರು ವರ್ಷದ ಮಗು ಸಂಜನಾ ಚಿಕಿತ್ಸೆ ಫಲಕಾರಿತಾಗದೆ ಮೃತಪಟ್ಟಿದೆ.

ಮೂರು ವರ್ಷದ ಮಗು ಸಂಜನಾ ಸೇರಿದಂತೆ ಕಟ್ಟಡದ ಅವಶೇಷಗಳಲ್ಲಿ ಆರು ಜನ ಸಿಲುಕಿದ್ದರು. ಕಟ್ಟದ ಕುಸಿತವಾಗಿ 30 ನಿಮಿಷವರೆಗೆ ಅಳುತ್ತಿದ್ದ ಸಂಜನಾ ಅಳು ನಿಲ್ಲಿಸಿದ್ದಳು. ಹೀಗಾಗಿ ಮಗು ಮೃತಪಟ್ಟಿರಬಹುದು ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ರಕ್ಷಣಾ ಕಾರ್ಯಾಚರಣೆ ವೇಳೆ ಸಂಜನಾ ಜೀವಂತವಾಗಿ ಪತ್ತೆಯಾಗಿತ್ತು.

ಶೇ.60ರಷ್ಟು ಸುಟ್ಟ ಗಾಯದಿಂದ ಬಳಲುತ್ತಿದ್ದ ಸಂಜನಾಳನ್ನು ಕೂಡಲೇ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅ.16 ರಿಂದ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜನಾ ಇಂದು ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ