ಎಲೆಕ್ಷನ್ ಎಫೆಕ್ಟ್: ಹೈ ಅಲರ್ಟ್

ಮಂಗಳವಾರ, 12 ಮಾರ್ಚ್ 2019 (14:25 IST)
ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಆಂಧ್ರದಿಂದ ಅಕ್ರಮ ಹಣ ಸಾಗಿಸುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಭಾರಿ ಭದ್ರತೆ ಕೈಗೊಂಡಿದೆ. ಆಂಧ್ರದ ಗಡಿ ಭಾಗಗಳಲ್ಲಿ ಪೊಲೀಸ್ ಹದ್ದಿನ ಕಣ್ಣು ಇಡಲಾಗಿದೆ.

ಆಂದ್ರಗ ಗಡಿ  ಮದನಪಲ್ಲಿ ಮತ್ತು ಹಿಂದೂಪುರ ರಸ್ತೆಗಳಲ್ಲಿ  ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಅನುಮಾನಾಸ್ಪದ ವಾಹನಗಳ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಕಾರು ಸೇರಿದಂತೆ ಭಾರಿ ವಾಹನಗಳ ಮೇಲೆ ನಿಗಾ ಇಡಲಾಗಿದೆ.

 ಡ್ಯಾಷ್ ಬೋರ್ಡ್ ಮತ್ತು ಡಿಕ್ಕಿಗಳನ್ನು ಚಾಚುತಪ್ಪದೇ ತಪಾಸಣೆ ಮಾಡುತ್ತಿರುವ ಪೊಲೀಸರು ಭದ್ರತೆ ಬಿಗಿಗೊಳಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ