ಖಡಕ್ ಆಫೀಸರ್ ಅಣ್ಣಾಮಲೈ ರಾಜಕೀಯಕ್ಕೆ ಎಂಟ್ರಿ

ಬುಧವಾರ, 29 ಮೇ 2019 (15:06 IST)
ದಕ್ಷ ಅಧಿಕಾರಿ ಕೆ ಅಣ್ಣಾಮಲೈ ರಾಜಕೀಯಕ್ಕೆ ಕೊಡುತ್ತಿದ್ದಾರೆ.

ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಕೊಡಲು ಸನ್ನದ್ಧರಾಗಿದ್ದಾರೆ ಕೆ. ಅಣ್ಣಾಮಲೈ. ಸಾಮಾಜಿಕ‌ ಸೇವೆಯಲ್ಲಿ ಮತ್ತಷ್ಟು  ತೊಡಗಿಸಿಕೊಳ್ಳುವ ಉದ್ದೇಶದಿಂದ ರಾಜಕೀಯಕ್ಕೆ ಎಂಟ್ರಿ ಕೊಡಲು ಚಿಂತನೆ ನಡೆಸುತ್ತಿದ್ದಾರೆ.

IPS ಹುದ್ದೆ ತೊರೆದು ರಾಜಕೀಯಕ್ಕೆ ಪ್ರವೇಶಿಸಲಿರುವ ಕೆ ಅಣ್ಣಾಮಲೈ ಇನ್ನು ಕೆಲವೇ ದಿನಗಳಲ್ಲಿ ರಾಜೀನಾಮೆ ನೀಡಲಿದ್ದಾರೆ.

ಸದ್ಯ ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ ಆಗಿರುವ ಅಣ್ಣಾಮಲೈ ತಮ್ಮ ರಾಜೀನಾಮೆ ಪುನರ್ ಪರಿಶೀಲಿಸುವಂತೆ ಸಹ ಉದ್ಯೋಗಿ ಅಧಿಕಾರಿಗಳು ಕೋರಿದ್ದಾರೆ. ಆದರೆ ಅಣ್ಣಾಮಲೈ ರಾಜೀನಾಮೆ ಪಕ್ಕಾ ಎನ್ನಲಾಗುತ್ತಿದ್ದು, ಮುಂದಿನ ದಾರಿ ಸಾಗಿದತ್ತ ಹೆಜ್ಜೆ ಹಾಕೋದಾಗಿ ಖಡಕ್ ಆಫೀಸರ್ ಹೇಳಿದ್ದಾರೆ.

ಇದಕ್ಕೂ ಮುನ್ನ ಚಿಕ್ಕಮಗಳೂರು ಎಸ್.ಪಿ, ಕಾರ್ಕಳ ಎಸ್.ಪಿ ಆಗಿ ಕಾರ್ಯನಿರ್ವಹಿಸಿದ್ದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ