ಶಾ ರಾಜ್ಯಕ್ಕೆ ಬಂದ್ರೂ, ಕಾಂಗ್ರೆಸ್ ನೂರಕ್ಕೆ ನೂರು ಗೆಲ್ಲುತ್ತೆ : ಸಿದ್ದರಾಮಯ್ಯ

ಶುಕ್ರವಾರ, 27 ಜನವರಿ 2023 (13:47 IST)
ಬೆಂಗಳೂರು : ನೂರು ಬಾರಿ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ರಾಜ್ಯಕ್ಕೆ ಬಂದರೂ ಕೂಡ ಈ ಬಾರಿ ಕಾಂಗ್ರೆಸ್ ನೂರಕ್ಕೆ ನೂರು ಗೆಲ್ಲುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸುಧಾಕರ್ ತನಿಖೆ ಮಾಡುವ ಮಾತೇ ಆಡಲ್ವಲ್ಲ. ಒಂದಂಕಿ ಲಾಟರಿ ಬಗ್ಗೆ ದೇವೇಗೌಡರು ಪ್ರಸ್ತಾಪ ಮಾಡಿದ್ದರು. ನನ್ನ ಮೇಲೆ ಜಾರ್ಜ್ ಮೇಲೆ ಆರೋಪ ಮಾಡಿದರು.

ನಾನು ಕೂಡಲೇ ಸಿಬಿಐ ತನಿಖೆಗೆ ಕೊಟ್ಟೆ, ಆ ಸಮಯದಲ್ಲಿ ಏನಾದರೂ ದಾಖಲೆ ಕೊಟ್ಟಿದ್ದರಾ? ಡಿಕೆ ರವಿ ಪ್ರಕರಣ ಸಿಬಿಐಗೆ ಕೊಟ್ಟೆ, ಡಿವೈಎಸ್ಪಿ ಗಣಪತಿ ಕೇಸ್ ಸಿಬಿಐಗೆ ಕೊಟ್ಟೆ. ಏನಾದರೂ ದಾಖಲಾತಿ ಕೊಟ್ಟಿದ್ದರಾ ಎಂದು ಪ್ರಶ್ನಿಸಿದರು. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ