ವಿದ್ಯಾವಂತರು ರಾಜಕೀಯಕ್ಕೆ ಬರದಿದ್ರೆ ಅಯೋಗ್ಯರು ಆಳುತ್ತಾರೆ: ಎಚ್.ಸಿ.ನೀರಾವರಿ

ಗುರುವಾರ, 20 ಏಪ್ರಿಲ್ 2017 (15:48 IST)
ವಿದ್ಯಾವಂತರು, ಬುದ್ದಿವಂತರು ರಾಜಕೀಯಕ್ಕೆ ಬರಬೇಕು. ಇಲ್ಲಾಂದ್ರೆ ಅಯೋಗ್ಯರು ನಮ್ಮನ್ನು ಆಳುತ್ತಾರೆ. ಅಂತಹ ಪರಿಸ್ಥಿತಿ ಇಂದು ರಾಜ್ಯಕ್ಕೆ ಬಂದೊದಗಿದೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಎಚ್.ಸಿ.ನೀರಾವರಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.
 
ವಯಸ್ಸಾಗಿದ್ದರಿಂದ ರಾಜಕೀಯದಿಂದ ದೂರವಿದ್ದೆ. ಇದೀಗ ಜೆಡಿಎಸ್ ವರಿಷ್ಠ ದೇವೇಗೌಡರ ಒತ್ತಾಸೆಯಿಂದಾಗಿ ಜೆಡಿಎಸ್ ಪಕ್ಷಕ್ಕೆ ಮರಳಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
 
ನನ್ನ ಮುಂದಿನ ರಾಜಕಾರಣವನ್ನು ಯಾವುದೇ ಫಲಾಪೇಕ್ಷೆ ಇಲ್ಲದೆಯೇ ಜನತೆಯ ಸೇವೆಗಾಗಿ ಮೀಸಲಿಡಬೇಕು ಎಂದು ಬಯಸಿದ್ದೇನೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ದೇವೇಗೌಡರೊಂದಿಗೆ ಪ್ರಚಾರ ಕಾರ್ಯಕೈಗೊಳ್ಳುವುದಾಗಿ ಮಾಜಿ ವಿಧಾನ ಪರಿಷತ್ ಸದಸ್ಯ ಎಚ್.ಸಿ.ನೀರಾವರಿ ತಿಳಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ