ಒಮೈಕ್ರೋನ್ ತಡೆಗೆ ಸಿದ್ಧತೆ ತಜ್ಞರ ಸಲಹೆ

ಗುರುವಾರ, 16 ಡಿಸೆಂಬರ್ 2021 (17:09 IST)
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಒಮಿಕ್ರಾನ್ ಸೋಂಕು ಪತ್ತೆ ಹಿನ್ನೆಲೆ 3ನೇ ಅಲೆಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮೂರನೇ ಅಲೆ ತಡೆಯಲು ಡಿಸೆಂಬರ್-ಜನವರಿ ನಿರ್ಣಾಯಕವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ತಜ್ಞರು ಸಲಹೆ ನೀಡುತ್ತಲೇ ಇದ್ದಾರೆ.
ಡಿಸೆಂಬರ್-ಜನವರಿಯಲ್ಲೇ ಹೆಚ್ಚು ಆರ್ಥಿಕ ವ್ಯವಹಾರಗಳು ಶುರುವಾಗಲಿದ್ದು ಜನರ ಚಟುವಟಿಕೆ ಹಾಗೂ ಓಡಾಟಗಳು ಹೆಚ್ಚಾಗಲಿವೆ. ಗುಂಪು ಸೇರುವುದು ಹೆಚ್ಚಾದರೆ ಸೋಂಕು ಹರಡುವಿಕೆಗೆ ಇದುವೇ ಕಾರಣವಾಗಲಿದೆ ಅನ್ನೋದು ತಜ್ಞರ ಆತಂಕವಾಗಿದೆ. ಹೀಗಾಗಿಯೇ ರಾಜ್ಯದಲ್ಲೂ ಕೋವಿಡ್ ಸಲಹಾ ಸಮಿತಿ ಸದಸ್ಯರು ಸರಣಿ ಸಭೆಗಳ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ