ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಿರುದ್ಧ ಇಂದು ರೈತರಿಂದ ಬಾರುಕೋಲು ಚಳುವಳಿ

ಬುಧವಾರ, 9 ಡಿಸೆಂಬರ್ 2020 (10:01 IST)
ಬೆಂಗಳೂರು : ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆ ವಾಪಾಸ್ ಗೆ ಆಗ್ರಹ. ಇಂದು ಬಾರುಕೋಲು ಚಳುವಳಿ ಮೂಲಕ ಸರ್ಕಾರಕ್ಕೆ ರೈತರಿಂದ ಎಚ್ಚರಿಕೆ ನೀಡಲಾಗುವುದು.

ರೈತರಿಗೆ ಸಾಥ್ ನೀಡಲಿರುವ ಕನ್ನಡಪರ ಸಂಘಟನೆಗಳು. ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಬಣದಿಂದ ಬೆಂಬಲ ನೀಡಲಾಗುವುದು. ಇಂದು ರೈತ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ. ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಮನವಿಗೆ ನಿರ್ಧಾರ ಮಾಡಲಾಗಿದೆ.

3 ಸಾವಿರಕ್ಕೂ ಹೆಚ್ಚು ಕನ್ನಡಿಗರಿಂದ ರಾಜಭವನಕ್ಕೆ ಜಾಥಾ ನಡೆಸಲಾಗಲಿದೆ.  ಬೆಳಿಗ್ಗೆ 10 ಗಂಟೆಯಿಂದ ಬಿಬಿಎಂಪಿಯಿಂದ ಜಾಥಾ ಆರಂಭ ವಾಗಲಿದ್ದು, ಕಾರ್ಪೋರೇಷನ್ ಸರ್ಕಲ್, ಹಡ್ಸನ್ ಸರ್ಕಲ್, ಮೈಸೂರು ಬ್ಯಾಂಕ್ ಸರ್ಕಲ್, ಫ್ರೀಡಂಪಾರ್ಕ್, ಅರಮನೆ ರಸ್ತೆ ಮೂಲಕ ರಾಜಭವನಕ್ಕೆ ಕನ್ನಡಿಗರಿಂದ ಕಾಲ್ನಡಿಗೆ ಜಾಥಾ ನಡೆಸಲಾಗುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ