ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ವಿದೇಶಿ ಪ್ರಜೆಯ ಬಳಿ ಸಜೀವ ಗುಂಡು ಪತ್ತೆ

ಬುಧವಾರ, 8 ಜನವರಿ 2020 (10:38 IST)
ಬೆಂಗಳೂರು : ವಿದೇಶಿ ಪ್ರಜೆಯ ಬಳಿ ಸಜೀವ ಗುಂಡು ಪತ್ತೆಯಾದ ಹಿನ್ನಲೆಯಲ್ಲಿ ಆತನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ನಡೆದಿದೆ.


ಮಂಗಳೂರು ಮೂಲದ ರೇಣಿ ಎಂಬಾತ ಪೊಲೀಸರು ಬಂಧಿಸಿದ ವ್ಯಕ್ತಿ. ಈತ ಆಸ್ಟ್ರೇಲಿಯಾದಲ್ಲಿ ಯೋಧನಾಗಿ ಕಾರ್ಯನಿರ್ವಹಿಸುತ್ತಿದ್ದ ಎಂಬುದಾಗಿ ತಿಳಿದುಬಂದಿದೆ.

 

ಕೆಂಪೇಗೌಡ ಏರ್ ಪೋರ್ಟ್ ಬಳಿ ಪರಿಶೀಲನೆ ನಡೆಸುತ್ತಿದ್ದ ವೇಳೆ ರೇಣಿ ಎಂಬಾತನ ಬಳಿ 2 ಸಜೀವ ಗುಂಡು ಪತ್ತೆಯಾದ ಕಾರಣ ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಏರ್ ಪೋರ್ಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ