ಕರ್ನಾಟಕಕ್ಕೆ ಬೆಂಕಿ ಹಚ್ಚೋದಿಲ್ಲ ಎಂದ ಮಾಜಿ ಸಚಿವ - ಯೂ ಟರ್ನ್ ಹೊಡೆದದ್ಯಾಕೆ?

ಗುರುವಾರ, 19 ಡಿಸೆಂಬರ್ 2019 (17:42 IST)
ಮಾಜಿ ಸಚಿವ ಯು.ಟಿ.ಖಾದರ್ ಯೂ ಟರ್ನ್ ಹೊಡೆದಿದ್ದಾರೆ.

ರಾಜ್ಯಕ್ಕೆ ಬೆಂಕಿ ಹಚ್ಚುತ್ತೇನೆ ಅಂತ ನಾನು ಹೇಳೇ ಇಲ್ಲ. ನನ್ನ ಮಾತನ್ನು ತಪ್ಪಾಗಿ ತಿರುಚಿ ಅರ್ಥೈಸಲಾಗಿದೆ ಎಂದಿದ್ದಾರೆ.

ಕರ್ನಾಟಕಕ್ಕೆ ಬೆಂಕಿ ಇಡೋದಾಗಿ ನಾನು ಹೇಳೇ ಇಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದಲ್ಲಿ ಅದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತದೆ ಅನ್ನೋ ಅರ್ಥದಲ್ಲಿ ನಾನು ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಕಾಯ್ದೆ ತಿದ್ದುಪಡಿ ಮೂಲಕ ಉತ್ತರ ಭಾಗದ ರಾಜ್ಯಗಳಿಗೆ ಬೆಂಕಿ ಹಚ್ಚಿದ್ದೀರಿ. ಆರ್ಥಿಕ ಕುಸಿತದ ಕಥೆ ಎಲ್ಲಿಗೆ ಬಂದು ನಿಂತಿದೆ. ಅದರಿಂದ ಪಾರಾಗಲು ಹೊಸ ಕಾಯ್ದೆ ಜಾರಿಗೆ ಕೇಂದ್ರ ಮುಂದಾಗಿದೆ ಅಂತ ಯು.ಟಿ.ಖಾದರ್ ದೂರಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ