ಅಪ್ಪ ಮಕ್ಕಳ ಪಕ್ಷ ಎಂದು ಟೀಕಿಸಿದವರಿಗೆ ಸ್ಪಷ್ಟನೆ ನೀಡಿದ ಮಾಜಿ ಪ್ರಧಾನಿ ದೇವೇಗೌಡರು

ಭಾನುವಾರ, 6 ಮೇ 2018 (08:04 IST)
ಚಿಕ್ಕಮಂಗಳೂರು : ಅಪ್ಪ ಮಕ್ಕಳ ಪಕ್ಷ ಎಂದು ಹಲವರು ಟೀಕೆ ಮಾಡಿರುವುದಕ್ಕೆ ಇದೀಗ ಮಾಜಿ ಪ್ರಧಾನಿ ದೇವೇಗೌಡರು ನನ್ನ ಮಗನನ್ನ ಮುಖ್ಯಮಂತ್ರಿ ಮಾಡಬೇಕು ಎಂದ್ದಿದ್ದರೆ, ನಾನು ಸಿಎಂ ಇಬ್ರಾಹಿಂ, ಸಿದ್ದರಾಮಯ್ಯ ಹಾಗೂ ಜೆ.ಎಚ್ ಪಟೇಲ್ ಅವರನ್ನು ಬೆಳೆಸುತ್ತಿರಲಿಲ್ಲ ಎಂದು ಹೇಳುವುದರ ಮೂಲಕ ಸ್ಪಷ್ಟನೆ ನೀಡಿದ್ದಾರೆ.


ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬಿರೂರಿನಲ್ಲಿಕಡೂರು ಶಾಸಕ ವೈ.ಎಸ್.ವಿ ದತ್ತ ಪರ ಪ್ರಚಾರದ ವೇಳೆ ಮಾತನಾಡಿದ ಅವರು,’ ಜೆಡಿಎಸ್​ಗೆ ಬಟನ್ ಹೊತ್ತಿದರೆ ಬಿಜೆಪಿಗೆ ಹೋಗುತ್ತೆ ಎಂದು ಮಹಾನ್ ಮುಖ್ಯಮಂತ್ರಿಯೊಬ್ಬರು ಹೇಳಿದ್ದಾರೆ. ಯಾರು ಅವರು, ಎಲ್ಲಿದ್ದರು ಎಂದು ನನಗೆ ಗೊತ್ತು. ಅವರನ್ನು ರಾಜಕೀಯವಾಗಿ ತಲೆ ಮೇಲೆ ಹೊತ್ತುಕೊಂಡು ನಾನು ತಿರುಗಿದ್ದೇನೆ. ನೆನಪಿರಲಿ ಈ ದೇವೇಗೌಡ ವ್ಯಕ್ತಿ ಅಲ್ಲ ಶಕ್ತಿ. ನನ್ನ ಹೆಸರಲ್ಲಿ ಗೌಡ ಅಂತ ಇರಬಹುದು. ಆದರೆ, ಸಣ್ಣ ಸಣ್ಣ ಜಾತಿಯವರನ್ನು ಹೊತ್ತಿಕೊಂಡು ನಾನು ಮುಂದೇ ತಂದಿದ್ದೇನೆ ಎಂದು ಪರೋಕ್ಷವಾಗಿ ಸಿ.ಎಂ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ