ಹಿರಿಯ ಗಾಂಧಿವಾದಿ ಹೊ. ಶ್ರೀನಿವಾಸಯ್ಯ ವಿಧಿವಶ

ಗುರುವಾರ, 6 ಏಪ್ರಿಲ್ 2017 (13:07 IST)
ಹಿರಿಯ ಗಾಂಧಿವಾದಿ, ಸ್ವಾಂತಂತ್ರ್ಯ ಹೋರಾಟಗಾರ,  ಕರ್ನಾಟದ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಹೋ. ಶ್ರೀನಿವಾಸಯ್ಯ ವಿಧಿವಶರಾಗಿದ್ದಾರೆ. ಕಿಡ್ನಿ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿದ್ದ 93 ವರ್ಷದ ಶ್ರೀನಿವಾಸಯ್ಯ ಬೆಳಗ್ಗೆ ಜಯದೇವ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಸಂದರ್ಭ ಮಹಾತ್ಮಾ ಗಾಂಧಿಯವರನ್ನ ಭೇಟಿ ಮಾಡಿ ಅವರ ತತ್ವ ಸಿದ್ಧಾಂತಗಳಿಂದ ಪ್ರಭಾವಿತರಾಗಿದ್ದರು. ಸ್ವಾತಂತ್ರ್ಯಂತೆ ಕಣ್ಹೋರಾಟದಲ್ಲೂ ತೊಡಗಿದ್ದರು.

ಗಾಂಧಿಭವನದಲ್ಲಿ ಸಂಜೆವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅವರ ಆಶಯದಂತೆ ಕಣ್ಣು ಮತ್ತು ದೇಹವನ್ನ ದಾನಮಾಡಲಾಗುವುದೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ