ನವದೆಹಲಿ: ಇತ್ತೀಚೆಗೆ ಅಹಮದಾಬಾದ್ ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದ ಬಳಿಕ ವಿಮಾನ ಟಿಕೆಟ್ ಬುಕಿಂಗ್ ಮಾಡುವವರು ವಿಶೇಷವಾಗಿ 11ಎ ಸೀಟ್ ಗೆ ಬೇಡಿಕೆಯಿಡುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ.
ಏರ್ ಇಂಡಿಯಾ ವಿಮಾನದಲ್ಲಿ 242 ಪ್ರಯಾಣಿಕರ ಪೈಕಿ 241 ಮಂದಿ ಸಾವನ್ನಪ್ಪಿದ್ದರು. ಆದರೆ ಏಕಮಾತ್ರ ಪ್ರಯಾಣಿಕ ರಮೇಶ್ ವಿಶ್ವಾಸ್ ಕುಮಾರ್ ಎಂಬವರು ಬದುಕುಳಿದಿದ್ದರು. ಅವರು ಅಂದು ಕೂತಿದ್ದು ಎಮರ್ಜೆನ್ಸ್ ಎಕ್ಸಿಟ್ ಬಳಿ 11ಎ ಸೀಟ್ ನಲ್ಲಿ.
ಕೆಲವು ವರ್ಷದ ಹಿಂದೆಯೂ ಇದೇ ಸೀಟ್ ನಂಬರ್ ನಲ್ಲಿ ಕೂತಿದ್ದ ಪ್ರಯಾಣಿಕರೊಬ್ಬರು ವಿಮಾನ ದುರಂತದಲ್ಲಿ ಬದುಕುಳಿದಿದ್ದರು. ಇದೇ ಕಾರಣಕ್ಕೆ ಈಗ ವಿಮಾನ ಬುಕಿಂಗ್ ಮಾಡುವಾಗ ಜನ ವಿಶೇಷವಾಗಿ ಈ ಸೀಟ್ ಗೆ ಡಿಮ್ಯಾಂಡ್ ಮಾಡುತ್ತಿದ್ದಾರಂತೆ.
ಇದು ಅದೃಷ್ಟದ ಸೀಟ್ ನಂಬರ್ ಆಗಿ ಈಗ ಬದಲಾಗಿದೆ. ಈ ಸೀಟ್ ನಲ್ಲಿ ವಿಶೇಷವಾಗಿಯೇನೂ ವ್ಯವಸ್ಥೆಯಿಲ್ಲ. ಕೇವಲ ಕಾಲು ಚಾಚಿ ಆರಾಮವಾಗಿ ಕುಳಿತುಕೊಳ್ಳುವಷ್ಟು ಸ್ಥಳವಿರುತ್ತದೆ ಎಂಬುದು ಬಿಟ್ಟರೆ ಬೇರೆ ವಿಶೇಷತೆಯಿಲ್ಲ. ಹಾಗಿದ್ದರೂ ಈ ಸೀಟ್ ನಲ್ಲಿ ಕೂತರೆ ಯಾವುದೇ ಅನಾಹುತವಾದರೂ ನಾವು ಪಾರಾಗುತ್ತೇವೆ ಎಂಬ ನಂಬಿಕೆ ಈಗ ಪ್ರಯಾಣಿಕರಿಗೆ ಶುರುವಾಗಿದೆ. ಆ ಕಾರಣಕ್ಕೆ ಈ ಸೀಟ್ ನಂಬರ್ ನ್ನೇ ಕೇಳಿ ಪಡೆಯುತ್ತಿದ್ದಾರೆ.