ಇನ್ಮುಂದೆ ರಸ್ತೆ ಆಗೆದರೆ ಸಂಬಳ ಕಟ್ ...!

ಶುಕ್ರವಾರ, 27 ಜನವರಿ 2023 (18:47 IST)
ಇನ್ನು ಮುಂದೆ ರಸ್ತೆಗಳನ್ನು ಅಗೆದರೆ ಸಂಬಂಧ ಪಟ್ಟ ಎಂಜಿನಿಯರ್ ಗಳ ಸಂಬಳ ಕಟ್ ಮಾಡಬೇಕಾಗುತ್ತದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಖಡಕ್ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಇತ್ತ ರಸ್ತೆ ಕಾಮಗಾರಿ ವಿಚಾರವಾಗಿ ಅಲರ್ಟ್ ಆಗಿರುವ ಬಿಬಿಎಂಪಿ ಎಂಜಿನಿಯರ್ ಗಳಿಗೆ ಒಂದು ಖಡಕ್ ಆದೇಶ ಮಾಡಿದ್ದು, ರಸ್ತೆಗಳನ್ನು ಅಗೆದರೆ ಸಂಬಂಧ ಪಟ್ಟ ಎಂಜಿನಿಯರ್ ಗಳ ಸಂಬಳ ಕಟ್ ಮಾಡಬೇಕಾಗುತ್ತದೆ ಎಂದು ಹೇಳಿದೆ. ರಸ್ತೆಗಳು ಚೆನ್ನಾಗಿ ಇರಬೇಕು.. ಹೀಗಾಗಿ ಸಣ್ಣ ಪುಟ್ಟ ಕಾಮಗಾರಿಗಳಾಗಿ ಸುಖಾಸುಮ್ಮನೆ ರಸ್ತೆಗಳನ್ನು ಅಗೆಯಬಾರದು. ಈ ಆದೇಶ ಪಾಲಿಸದಿದ್ದರೆ ಎಂಜಿನಿಯರ್ ಗಳ ಸಂಬಳ ಕಟ್ ಮಾಡೋದಾಗಿ ಪಾಲಿಕೆ ಸೂಚಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ