ಕೆಡಿಪಿ ಸಭೆಯಿಂದ ಅರ್ಧಕ್ಕೆ ಎದ್ದು ಹೊರ ನಡೆದ ಸಚಿವ: ಕಾರಣ ಏನು?

ಶುಕ್ರವಾರ, 18 ಜನವರಿ 2019 (16:10 IST)
ಕೆಡಿಪಿ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಸಚಿವ ಹಾಗೂ ಶಾಸಕರು ಹೊರ ನಡೆದ ಘಟನೆ ನಡೆದಿದೆ.
ಸಭೆಯನ್ನು ಮೊಟಕುಗೊಳಿಸಿ ಸಚಿವ ಪುಟ್ಟರಾಜು ಹಾಗೂ ಶಾಸಕರು ಹೊರ ನಡೆದರು.

ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಚುಂಚನಗಿರಿಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಸಚಿವರು ಸಭೆಯನ್ನು ಮೊಟಕುಗೊಳಿಸಿದರು.

ಸಭೆ ಅರ್ಧಕ್ಕೆ ಮೊಟಕುಗೊಳಿಸಿದ ಬಳಿಕ ಚುಂಚನಗಿರಿಯತ್ತ ಸಚಿವ ಹಾಗೂ ಶಾಸಕರು ದೌಡಾಯಿಸಿದರು.
ಮತ್ತೆ ಇದೇ ತಿಂಗಳ 29 ಕ್ಕೆ ಕೆಡಿಪಿ ಸಭೆ ನಡೆಸುವಂತೆ ಸೂಚನೆಯನ್ನು ಉಸ್ತುವಾರಿ ಸಚಿವ ಪುಟ್ಟರಾಜು ನೀಡಿದರು.

ಸಿಎಂ ಚುಂಚನಗಿರಿಗೆ ಭೇಟಿ ನೀಡಿ ಶತಾಯುಷಿ ಶಿವಕುಮಾರ ಸ್ವಾಮೀಜಿ ಆರೋಗ್ಯ ವಿಚಾರಣೆ ನಡೆಸುತ್ತಿದ್ದು, ಸಿಎಂ ಆಗಮಿಸಿದ ವೇಳೆ ಉಸ್ತುವಾರಿ ಸಚಿವ ಹಾಗೂ ಶಾಸಕರು ಹಾಜರಿರಬೇಕು. ಆದ್ದರಿಂದ ಎಲ್ಲಾ ಶಾಸಕರು ಅಲ್ಲಿಗೆ ತೆರಳುತ್ತಿದ್ದೇವೆ. ಯಾರೂ ಅನ್ಯತಾ ಭಾವಿಸದಂತೆ ಮನವಿ ಮಾಡಿ ಸಭೆಯಿಂದ ಉಸ್ತುವಾರಿ ಸಚಿವ ಪುಟ್ಟರಾಜು ತೆರಳಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ