ಗರಂ ಆಗಿದ್ದ ಸಾರಿಗೆ ಸಚಿವ ಮುಚ್ಚೋ ಬಾಯಿ ಎಂದ

ಮಂಗಳವಾರ, 23 ಜನವರಿ 2018 (10:21 IST)
ಮಂಡ್ಯದ ಮದ್ದೂರಿನ ಕೊಪ್ಪ ಸಾರಿಗೆ ಬಸ್ ನಿಲ್ದಾಣ ಉದ್ಘಾಟನೆಗೆ ಬಂದಿದ್ದ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರು ವ್ಯಕ್ತಿಯೊಬ್ಬರ ವಿರುದ್ಧ ಗರಂ ಆಗಿ ಮುಚ್ಚೋ ಬಾಯಿ ಎಂದು ರೇಗಿದ್ದಾರೆ.

ಸಚಿವರು ಭಾಷಣ ಮಾಡುತ್ತಿದ್ದಾಗ ಗಲಾಟೆ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಕೋಪಗೊಂಡಿದ್ದ ಸಚಿವರು ತಡಿಲಾ ಗೌಡ, ಬಲು ಮಾತಾಡ್ತಿಯಾ ನೀನು, ಮುಚ್ಚೋ ಬಾಯಿ ಸಭೆ ಹಾಳು ಮಾಡಬೇಡ ಎಂದಿದ್ದಾರೆ.

ವ್ಯಕ್ತಿಯ ವಿರುದ್ಧ ಕೋಪಗೊಂಡಿದ್ದ ಸಚಿವರು ಎರಡು ಬಾರಿ ತಡಿಲಾ ಗೌಡ ಎಂದು ಸಮಾಧಾನ ಪಡಿಸಿದರೂ, ಗಲಾಟೆ ಮುಂದುವರೆಸಿದ್ದರಿಂದ ಸಚಿವರು ಮೇಲಿನಂತೆ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ