ಆಹಾರ ಪದಾರ್ಥಗಳ ಮೇಲೆ ಜಿ. ಎಸ್. ಟಿ. ಸರಿಯಲ್ಲ

ಮಂಗಳವಾರ, 19 ಜುಲೈ 2022 (14:48 IST)
ಶ್ರೀಲಂಕಾಗಿಂತ ನಮ್ಮ ಭಾರತದ ಸ್ಥಿತಿ ಸರಿಯಿಲ್ಲ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ ಹೆಚ್ಚಳ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಇದಾಗಿದೆ.
ಶ್ರೀಲಂಕಾಗಿಂತ ನಮ್ಮ ಭಾರತದ ಸ್ಥಿತಿ ಸರಿಯಿಲ್ಲ. ದೇಶದಲ್ಲಿ ಎರಡು 2 ಹೊತ್ತು ಊಟಕ್ಕೂ ಇಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಹಾಲು , ಮೊಸರು, ಉಪ್ಪಿನಕಾಯಿ ಮೇಲೆ ಟ್ಯಾಕ್ಸ್‌ ಹಾಕಲಾಗಿದೆ. ಕೇಂದ್ರ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ ಆಹಾರ ಪದಾರ್ಥಮೇಲೆ ಜಿಎಸ್‌ಟಿ ಹಾಕಿದ್ದು ಜನವಿರೋಧಿ ನೀತಿಯಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ