ಸರಕಾರಿ ನೌಕರಿ ಎಂದರೆ ಅದೃಷ್ಟವಿದ್ದಂತೆ: ಸಿಎಂ ಸಿದ್ರಾಮಯ್ಯ

ಶನಿವಾರ, 25 ಮಾರ್ಚ್ 2017 (15:58 IST)
ಸರಕಾರಿ ನೌಕರಿ ಎಂದರೆ ಅದೃಷ್ಟ. ಒಂದು ಬಾರಿ ಸರಕಾರಿ ನೌಕರಿಗೆ ಸೇರಿದಲ್ಲಿ ಜೀವನಪರ್ಯಂತ ನೆಮ್ಮದಿಯಾಗಿರಬಹುದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 
ಸರಕಾರಿ ನೌಕರರಿಗೆ ಯಾವುದೇ ರಿನೀವಲ್ ಬೇಕಾಗಿಲ್ಲ. ಒಂದು ಬಾರಿ ಸರಕಾರಿ ನೌಕರಿ ಸಿಕ್ಕಿತೆಂದರೆ ಅದೃಷ್ಟ ಖುಲಾಯಿಸಿದಂತಾಗುತ್ತದೆ ಎಂದು ತಿಳಿಸಿದ್ದಾರೆ.
 
ರಾಜಕಾರಣದಲ್ಲಿ ರಾಜಕಾರಣಿಗಳು ಪ್ರತಿ ಐದು ವರ್ಷಗಳಿಗೊಮ್ಮೆ ರಿನೀವಲ್ ಮಾಡಿಸಬೇಕಾಗುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
 
ನಮಗಿಂತ ಹೆಚ್ಚು ನಿಮಗೆ ಸಮಾಜದ ಕೆಲಸ ಮಾಡಲು ಅವಕಾಶವಿದೆ. ನಿಮ್ಮ ಅಧಿಕಾರವಧಿಯಲ್ಲಿ ಜನಪರ ಕಾರ್ಯನಿರ್ವಹಿಸಿ ಭೇಷ್ ಎನಿಸಿಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಸರಕಾರಿ ನೌಕರರಿಗೆ ಕರೆ ನೀಡಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ