‘ಸಿಎಂ ಯಡಿಯೂರಪ್ಪ ಸತ್ಯ ಹರಿಶ್ಚಂದ್ರನ ಮೊಮ್ಮಗನಲ್ಲ...’

ಬುಧವಾರ, 30 ಅಕ್ಟೋಬರ್ 2019 (19:26 IST)
ಸಿಎಂ ಯಡಿಯೂರಪ್ಪ ಸತ್ಯ ಹರಿಶ್ಚಂದ್ರನ ಮೊಮ್ಮಗ ಅಲ್ಲ. ಹೀಗಂತ ಮಾಜಿ ಸಂಸದರೊಬ್ಬರು ವಾಗ್ದಾಳಿ ನಡೆಸಿದ್ದಾರೆ.

ಬಿ.ಎಸ್.ಯಡಿಯೂರಪ್ಪಗೆ ನಿಜವಾಗಲೂ ತಾಕತ್ ಇದ್ದಲ್ಲಿ ರಾಜ್ಯ ಸರಕಾರವನ್ನು ವಿಸರ್ಜಿಸಬೇಕು. ಹೊಸದಾಗಿ ಜನಾದೇಶ ಪಡೆಯೋದಕ್ಕೆ ಮುಂದೆ ಬರಲಿ ಎಂದು ಸವಾಲು ಹಾಕಿದ್ರು.

ಹೆಗಲ್ ಮೇಲೆ ಹಸಿರು ಟವಲ್ ಹಾಕಿಕೊಂಡು ಯಡಿಯೂರಪ್ಪ ಗೋಸುಂಬೆ ಥರ ರಾಜಕಾರಣ ಮಾಡ್ತಿರೋದನ್ನು ಬಿಡಬೇಕು ಅಂತ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹರಿಹಾಯ್ದರು.

ಸಂಕಷ್ಟದಲ್ಲಿರೋ ನೆರೆ ಸಂತ್ರಸ್ತರಿಗೆ ಸ್ಪಂದಿಸೋವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಅಂತ ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ