ಚಾಮರಾಜಪೇಟೆ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡಲು ಗ್ರೀನ್ ಸಿಗ್ನಲ್

ಸೋಮವಾರ, 23 ಜನವರಿ 2023 (17:00 IST)
ಚಾಮರಾಜಪೇಟೆ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡಲು ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ಸಂಸದ ಪಿ.ಸಿ.ಮೋಹನ್ ಹೇಳಿದ್ದಾರೆ.
 
ಈ ವೇಳೆ ಮಾತನಾಡುದ ಪಿಸಿ ಮೋಹನ್ ಕಂದಾಯ ಸಚಿವ ಅಶೋಕ್ ಜೊತೆ ಮಾತಾಡಿದ್ದೇನೆ.ಇದೇ 26ನೇ ತಾರೀಖು ಸರ್ಕಾರದಿಂದಲೇ ಆದ್ದೂರಿಯಾಗಿ ಗಣರಾಜ್ಯೋತ್ಸವ ಆಚರಣೆ ಮಾಡ್ತೇವೆ.ಸರ್ಕಾರ ಒಪ್ಪಿಗೆ ನೀಡಿದ್ದು, ಮಕ್ಕಳು, ಪೊಲೀಸ್ ಭದ್ರತೆ ನಿಟ್ಟಿನಲ್ಲಿ ಚೆನ್ನಾಗಿ ಪ್ಲಾನ್ ಮಾಡಲಿದ್ದೇವೆ.ಕಳೆದ ಭಾರಿ ಧ್ವಜಾರೋಹಣವನ್ನು ಯಾರು ಮಾಡಿದ್ರು ಅವರೇ ಈ ಸಲ ನಡೆಸಿಕೊಡ್ತಾರೆ.ಬೆಂಗಳೂರು ನಗರ ಡಿಸಿಗೆ ಸರ್ಕಾರ ಸೂಚನೆ ನೀಡಿದೆ.ನಾಳೆ ಡಿ.ಸಿ.ರವರ ಬಳಿ ಮತ್ತೆ ಚರ್ಚೆ ನಡೆಸುತ್ತೇನೆ.ಸರ್ಕಾರದ ಕಾರ್ಯಕ್ರಮ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳಿಗೆ ಸರ್ಕಾರ ಆಹ್ವಾನ ನೀಡಲಿದೆ ಎಂದು ಪಿಸಿ ಮೋಹನ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ