ತಮ್ಮ ಸೋಲಿಗೆ ಮಾಜಿ ಸಚಿವ ಎಚ್. ಆಂಜನೇಯ ಕೊಟ್ಟ ಕಾರಣ ನೋಡಿ!

ಬುಧವಾರ, 23 ಮೇ 2018 (10:58 IST)
ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಗೆದ್ದವರು ಸಚಿವ ಸ್ಥಾನದ ಕನಸು ಕಾಣುತ್ತಿದ್ದರೆ, ಇತ್ತ ಸೋತವರು ಸೋಲಿಗೆ ಕಾರಣ ಹುಡುಕುತ್ತಿದ್ದಾರೆ.

ಮಾಜಿ ಸಚಿವ, ಕಾಂಗ್ರೆಸ್ ನಾಯಕ ಎಚ್. ಆಂಜನೇಯ ತಮ್ಮ ಸೋಲಿಗೆ ಹೊಸ ಕಾರಣ ಕೊಟ್ಟಿದ್ದಾರೆ. ತಮ್ಮ ಸೋಲಿಗೆ ಮೋದಿ, ಯಡಿಯೂರಪ್ಪ ಅಲೆಯೇ ಕಾರಣ ಎಂದು ಆಂಜನೇಯ ಹೇಳಿಕೊಂಡಿದ್ದಾರೆ.

ನಮ್ಮ ಭಾಗದ ಜನ ಮೋದಿ, ಯಡಿಯೂರಪ್ಪ ಅಂತಾರೆ. ಹೀಗಾಗಿಯೇ ನಾನು ಸೋತೆ. ಹಾಗಂತ ಸೋತಿದ್ದಕ್ಕೆ ಬೇಜಾರಿಲ್ಲ. ಸಾಕಷ್ಟು ಸೋಲು-ಗೆಲುವು ಕಂಡಿದ್ದೇನೆ. ಎಂಎಲ್ಎ ಆಗಿ ಸೋತಿದ್ದೇನೆಂದು ಎಂಎಲ್ ಸಿಯಾಗಿ ವಿಧಾನಸಭೆ ಪ್ರವೇಶಿಸುವ ಆಸೆ ತನಗಿಲ್ಲ ಎಂದೂ ಅವರು ಮಾಧ್ಯಮಗಳಿಗೆ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ