ಕೈಕೊಟ್ಟ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸರ್ವರ್-ವಿದ್ಯಾರ್ಥಿಗಳು ಅತಂತ್ರ

geetha

ಶನಿವಾರ, 3 ಫೆಬ್ರವರಿ 2024 (12:02 IST)
ಬೆಂಗಳೂರು-ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸರ್ವರ್ ಕೈಕೊಟ್ಟಿದ್ದು,ರಾಜ್ಯಾದ್ಯಂತ ವಿದ್ಯಾರ್ಥಿಗಳು ಪರದಾಟ ನಡೆಸಿದ್ದಾರೆ.ಸಿಇಟಿಗೆ ಅರ್ಜಿ ಸಲ್ಲಿಸಲು ಸರ್ವರ್ ಡೌನ್ ಆಗಿದೆ.ದಾಖಲೆಗಳನ್ನ ಆಪ್ಲೋಡ್ ಮಾಡಲು ವಿದ್ಯಾರ್ಥಿಗಳು ಎಲ್ಲೆಡೆ ಪರದಾಟ ನಡೆಸಿದ್ದಾರೆ.ರಾಜ್ಯಾದ್ಯಂತ ಕೆಇಎ ಸರ್ವರ್ ಡೌನ್ ಆಗಿದ್ದು,ಅಭ್ಯರ್ಥಿಗಳು ಅನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ10 ಕೊನೆ ದಿನವಾಗಿದೆ.

ಏಪ್ರಿಲ್18- 19 ರಂದು ಸಿಇಟಿ ಪರೀಕ್ಷೆ ಇದೆ.ವೃತ್ತಿಪರ ಪರ ಕೋರ್ಸ್ ಪ್ರವೇಶ ಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ ಇದ್ದಾಗಿದ್ದು,ಕಳೆದ ನಾಲ್ಕೈದು ದಿನದಿಂದ ಸರ್ವರ್ ಸಮಸ್ಯೆ ಯಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗ್ತಿಲ್ಲ.ಏಕ ಕಾಲದಲ್ಲಿ ಎಸ್‌ಎಟಿಎಸ್‌ ತಂತ್ರಾಂಶವನ್ನು ಬಳಕೆ ಮಾಡುವುದರಿಂದ ಸಮಸ್ಯೆ ತಲೆದೋರಿದೆ.ಕೂಡಲೇ ಸಮಸ್ಯೆ ಬಗೆಹರಿಸುವಂತೆ ವಿದ್ಯಾರ್ಥಿಗಳು ಪರೀಕ್ಷಾ ಪ್ರಾಧಿಕಾರಕ್ಕೆ ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ