BSY ಗೆ ಸಂಕಷ್ಟ: ಜಮಖಂಡಿ ಜಿಲ್ಲೆಗೆ ಆಗ್ರಹಿಸಿ ಭಾರಿ ಮೆರವಣಿಗೆ

ಗುರುವಾರ, 3 ಅಕ್ಟೋಬರ್ 2019 (16:46 IST)
ರಾಜ್ಯ ಸರಕಾರ ಹೊಸ ಜಿಲ್ಲೆಗಳನ್ನು ಘೋಷಣೆ ಮಾಡೋಕೆ ಸಿದ್ಧತೆ ನಡೆಸಿರೋ ಬೆನ್ನಲ್ಲೇ ಜಮಖಂಡಿ ಜಿಲ್ಲೆಯಾಗಬೇಕೆಂದು ಆಗ್ರಹ ಬಲವಾಗಿ ಕೇಳಿಬರುತ್ತಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿಯನ್ನು ನೂತನ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು. ಹೀಗಂತ ಆಗ್ರಹಿಸಿ ಪ್ರತಿಭಟನಾ ರ್ಯಾಲಿ ನಡೆಯಿತು. ಆದರೆ ಪ್ರತಿಭಟನೆಯಿಂದ ದೂರ ಉಳಿದಿದ್ದಾರೆ ಜನಪ್ರತಿನಿಧಿಗಳು.

ಶಾಲಾ - ಕಾಲೇಜು ವಿದ್ಯಾರ್ಥಿಗಳು, ಸಂಘ, ಸಂಸ್ಥೆಗಳು, ಪಾದಯಾತ್ರೆಯಲ್ಲಿ  ಭಾಗಿಯಾಗಿದ್ರು.

ಜಮಖಂಡಿ ಓಲೇಮಠದ ಚನ್ನಬಸವ ಶ್ರೀಗಳು ನೇತೃತ್ವ ವಹಿಸಿದ್ರು. ಚನ್ನಬಸವ ಶ್ರೀಗಳಿಗೆ 15 ಕ್ಕೂ ಹೆಚ್ಚು ಮಠಾಧೀಶರು ಸಾಥ್ ನೀಡಿದ್ರು.

ಜಮಖಂಡಿ ನಗರದ ಹನುಮಾನ ಚೌಕದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು, ಜಮಖಂಡಿ ನೂತನ ಜಿಲ್ಲೆಗೆ ಆಗ್ರಹಿಸಿ ಘೋಷಣೆ ಕೂಗಿದ್ರು. ಜಮಖಂಡಿ ಜಿಲ್ಲೆಯಾಗಬೇಕು. ಸಾವಳಗಿ ತಾಲೂಕು ರಚನೆಯಾಗಬೇಕೆಂದು ಒತ್ತಾಯ ಮಾಡಿದ್ದಾರೆ.  

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ